Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಊರಮ್ಮದೇವಿ ಸೇವಾ ಟ್ರಸ್ಟ್

ದೇವದಾಸಿಯರ ಬಾಳಲ್ಲಿ ಸ್ವಾಭಿಮಾನದ ಬೆಳಕು ಹರಿಸಿದ ಸಂಸ್ಥೆ ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ ಉದ್ಯೋಗಿಗಳಾಗಿ ಹೊಸ ಬದುಕು ಕಂಡುಕೊಂಡ ನಿರ್ಭಾಗ್ಯರು.
ಬಳ್ಳಾರಿ ಜಿಲ್ಲೆಯ ೧೦,೫೪೦ ಮಾಜಿ ದೇವದಾಸಿಯರ ಪೈಕಿ ಕೂಡ್ಲಿಗಿಯಲ್ಲೇ ಅಗ್ರಪಾಲು, ಈ ಮಾಜಿ ದೇವದಾಸಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಜಿಲ್ಲಾಡಳಿದಿಂದ ಶೇಂಗಾ ಚಿಕ್ಕಿ ತಯಾರಿಕಾ ಘಟಕ ಸ್ಥಾಪಿಸಿ ಉದ್ಯೋಗಿನಿ ಯೋಜನೆಯಡಿ ಸಾಲ ಒದಗಿಸುವಿಕೆ. ಆ ಘಟಕದ ನಿರ್ವಹಣೆಯ ಹೊಣೆ ಹೊತ್ತಿದ್ದು ದೇವದಾಸಿ ಸ್ವಾವಲಂಬನ ಕೇಂದ್ರ ಮುಂದಿನದ್ದು ಪರಿಶ್ರಮಕ್ಕೆ ದೊರೆತ ಯಶಸ್ಸಿನ ಕಥೆ. ನಿತ್ಯ ನಾಲ್ಕು ಸಾವಿರ ಚಿಕ್ಕಿ ತಯಾರಿಕೆಯಲ್ಲಿ ತೊಡಗಿರುವ ಕೇಂದ್ರದ ಮಾಜಿ ದೇವದಾಸಿಯರು ತಾಲ್ಲೂಕಿನ ೩೦೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಚಿಕ್ಕಿ ಪೂರೈಸುತ್ತಿರುವುದು ವಿಶೇಷ, ಮಾಸಿಕ ೭ ಲಕ್ಷ ಚಿಕ್ಕಿಗೆ ಬೇಡಿಕೆಯಿದ್ದು ಆ ಬೇಡಿಕೆ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ಮಾಜಿ ದೇವದಾಸಿಯರ ಶ್ರಮದಾನಕ್ಕೆ ಇದೀಗ ಪ್ರಶಸ್ತಿಯಿಂದ ಸಾರ್ಥಕತೆ.