Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ರೋನಾಲ್ಡ್ ಕೊಲಾಸೋ

ಮಂಗಳೂರಿನವರಾದ ರೋನಾಲ್ಡ್ ಕೊಲಾಸೋ ವಿದೇಶದಲ್ಲಿ ನೆಲೆಸಿ ಅನೇಕ ಉದ್ಯಮಗಳನ್ನು ಕಟ್ಟಿದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸ್ವಂತ ಖರ್ಚಿನಿಂದ ಜಾರಿಗೊಳಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನೇಕ ಪೋಲೀಸ್ ಕಚೇರಿಗಳನ್ನು ನವೀಕರಣಗೊಳಿಸುವುದರಲ್ಲಿ ಹಾಗು ತಾಲೂಕು ಪಂಚಾಯಿತಿ ಕಚೇರಿಗಳನ್ನು ನಿರ್ಮಾಣ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೊನಾಲ್ಡ್ ಕೊಲಾಸೋ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಸೌಹಾರ್ದತೆಗಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಲಾಸೋ, ಅನ್ನ ಆರೋಗ್ಯ ಒದಗಿಸುವಲ್ಲಿಯೂ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ರೊನಾಲ್ಡ್ ಕೊಲಾಸೋ ಅವರಿಗೆ ಪ್ರತಿಷ್ಠಿತ ಟೈಮ್ಸ್ ನೌ ಗ್ಲೋಬಲ್ ಏನ್.ಆರ್.ಐ ಪ್ರಶಸ್ತಿ, ಇಂಡಿಯನ್ ಬಹರೇನ್ ಸೆಂಟಿನರಿ ಅವಾರ್ಡ್, ವಿಶ್ವ ಕೊಂಕಣಿ ಸಮ್ಮೇಳನದ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.