Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಲಿಂಗಾಯತ ಪ್ರಗತಿಶೀಲ ಸಂಘ, ಗದಗ

ನಾಡಿನ ಹೆಮ್ಮೆಯ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಗದಗಿನ ಲಿಂಗಾಯತ ಪ್ರಗತಿಶೀಲ ಸಂಘ. ಬಹುರೂಪಿ ಸಾಧನೆಗೈದು ದಾಖಲೆ ಬರೆದ ಸೇವಾಸಂಸ್ಥೆ-ಗದಲಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಂಗಸಂಸ್ಥೆಯಾದ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆಯಾಗಿದ್ದು ೧೯೭೦ರಲ್ಲಿ. ಅಪ್ಪಣ್ಣ ಮಾನ್ವಿ, ಪಿ.ಎಸ್.ಸಂಶಿಮಠ ಮತ್ತಿತರ ಸಮಾನಮನಸ್ಕ ಸ್ನೇಹಿತರು ಸ್ಥಾಪಿಸಿದ ಈ ಸಂಸ್ಥೆ ೧೯೭೨ರಿಂದ ಸತತ ೫೧ ವರ್ಷಗಳಿಂದ ಜನಮಾನಸವನ್ನು ತಿದ್ದಿ ಸಾಂಸ್ಕೃತಿಕ ಪರಿಸರ ನಿರ್ಮಿಸುವ ಘನಕಾರ್ಯದಲ್ಲಿ ತೊಡಗಿದೆ. ಪ್ರತಿ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಸಂಘದ ಹೆಜ್ಜೆಗುರುತು. ೫೧ ವರ್ಷಗಳಿಂದ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ೨೬೧೦ ಶಿವಾನನುಭವ ಗೋಷ್ಠಿ ನಡೆಸಿರುವುದು ಚಾರಿತ್ರಿಕದಾಖಲೆ. ನಾಡಿನ ಸರ್ವಕ್ಷೇತ್ರದ ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಬೆಳಗಿರುವುದು ವಿಶೇಷ. ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ರಕ್ತದಾನ, ನೇತ್ರದಾನಶಿಬಿರ, ಜಾನಪದ, ರಂಗಭೂಮಿ, ಕೃಷಿಮೇಳಗಳು ಮತ್ತು ಕಮ್ಮಟಗಳನ್ನು ನಿರಂತರವಾಗಿ ನಡೆಸುತ್ತಿರುವುದು ಮಾದರಿ ನಡೆ.ಮಠಗಳು ಧರ್ಮದಾಚೆಗೆ ಜನಮನವನ್ನು ಕಟ್ಟಬೇಕೆಂಬ ಲೋಕಮಾತನ್ನು ನಿಜವಾಗಿಸಿದ ಲಿಂಗಾಯತ ಪ್ರಗತಿಶೀಲ ಸಂಘದ ನಮ್ಮ ನಡುವಿರುವ ಹೆಮ್ಮೆಯ ಸೇವಾಕೇಂದ್ರ.