Categories
ಕನ್ನಡ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಾಂತಿ ಕುಟೀರ

ಶಾಂತಿ ಕುಟೀರ ಸಂಸ್ಥೆಯು ನಾಡಿನ ಅಸಂಖ್ಯಾತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತಿರುವ ಸಂಸ್ಥೆಗಳಲ್ಲೊಂದು. ಈ ಆಧ್ಯಾತ್ಮಿಕ ಸಂಸ್ಥೆಯನ್ನು ಆರಂಭಿಸಿದ ಶ್ರೀ ಗಣಪತರಾವ ಮಹಾರಾಜರಿಗೆ ಈಗ ನೂರು ವರ್ಷ

ಲೌಕಿಕ ಶಿಕ್ಷಣ ಪಡೆದರೂ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡ ಗಣಪತರಾವ್ ಮಹಾರಾಜರು ಆಧ್ಯಾತ್ಮ ಸಾಧನೆಯಿಂದ ಹೊಸ ಹಾದಿಯನ್ನು ಹುಡುಕಿಕೊಟ್ಟರಲ್ಲದೆ ಅದನ್ನು ಸಮರ್ಥವಾಗಿ ಮುಂದುವರೆಸಲು ಅನುಕೂಲವಾಗುಂತೆ ವಿಜಾಪುರ ಜಿಲ್ಲೆಯ ಕನ್ನೂರಿನಲ್ಲಿ ಶಾಂತಿ ಕುಟೀರವನ್ನು ಸ್ಥಾಪಿಸಿದರು. ಐದು ದಶಕಗಳ ಕಾಲ ಅಸಂಖ್ಯಾತ ಶಿಷ್ಯರಿಗೆ ನಾಮಮಂತ್ರವನ್ನು ಉಪದೇಶಿಸಿದ ಶ್ರೀ ಗಣಪತರಾವ್ ಮಹಾರಾಜ್ ಹಲವು ಮೌಲ್ಯಯುತ ಗ್ರಂಥಗಳನ್ನು ರಚಿಸಿರುವುದೇ ಅಲ್ಲದೇ ಸತತವಾಗಿ ತಮ್ಮ ಪ್ರವಚನಗಳಿಂದ ಅಸಂಖ್ಯಾತ ಜನರನ್ನು ತಲುಪಿದ್ದಾರೆ.