Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕನ್ನಡ ಸಾಹಿತ್ಯ ಪರಿಷತ್ತು

೧೯೧೫ರಲ್ಲಿ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದ ಫಲವಾಗಿ ನಾಡಿಗೆ ದೊರಕಿದ ಹಲವು ಪ್ರಗತಿಪರ ಸಂಸ್ಥೆಗಳಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸ್ಥಾಪಿಸಿದ ಸಂಸ್ಥೆ, ಕಾಲಾಂತರದಲ್ಲಿ ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಂಡಿತು.

ಕರ್ನಾಟಕ ಏಕೀಕರಣವೂ ಸೇರಿದಂತೆ, ಕನ್ನಡ ನಿಘಂಟು, ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್, ಮಹಾಜನ ವರದಿ, ಸರೋಜಿನಿ ಮಹಿಷಿ ವರದಿ, ಗೋಕಾಕ್ ಚಳುವಳಿಯಂತಹ ಸಂದರ್ಭಗಳಲ್ಲಿ ಹೋರಾಟದ ಮುಂಚೂಣಿಯಲ್ಲಿತ್ತು.

ಕನ್ನಡ ಭಾಷೆ ಹಾಗೂ ಬದುಕಿನ ಹಾದಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಭಾಷೆಯ ತಳಹದಿಯ ಮೇಲೆ ಒಂದು ಶತಮಾನದಷ್ಟು ಕಾಲ ಜೀವಂತವಾಗಿರುವ ಸಂಸ್ಥೆ ಇಡೀ ಭಾರತದಲ್ಲಿ ಇದೊಂದೇ ಆಗಿದೆ. ನೂರು ವರುಷ ಕಂಡಿರುವ ಕ.ಸಾ.ಪ. ಈಗ ತನ್ನ ಕಾರ್ಯಚಟುವಟಿಕೆಗಳನ್ನು ಹಳ್ಳಿಯವರೆಗೆ ವಿಸ್ತರಿಸಿದೆ.