Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಸಿ. ಬರ್ಮನ್

ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಪಾತ್ರರಾದ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು ಶರತ್ ಚಂದ್ರ ಬರ್ಮನ್ ಅವರು.
೧೯೩೯ರ ಜೂನ್ ೫ ರಂದು ಜನನ, ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಮಾರ್ಡನ್ ಹಿಸ್ಟರಿ ಕೋರ್ಸ್‌ನಲ್ಲಿ ಪದವಿ.
೧೯೬೪ನೇ ತಂಡದ ಐಪಿಎಸ್ ಅಧಿಕಾರಿ. ಆರಂಭಿಕ ತರಬೇತಿ ನಂತರ ಹುಬ್ಬಳ್ಳಿ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ದಕ್ಷ ಆಡಳಿತ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಬೆಂಗಳೂರಿನಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯ ಪರ ವಿರೋಧದ ಹೋರಾಟ ಉತ್ತುಂಗ ತಲುಪಿದ ಅವಧಿಯಲ್ಲಿ ಬರ್ಮನ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದರು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದು ಅವರ ಕಾರ್ಯ ದಕ್ಷತೆಗೆ ನಿದರ್ಶನ.
ಸಿಐಡಿ ವಿಭಾಗದ ಡಿಜಿಪಿ, ಬೆಂಗಳೂರು ನಗರ ಕಮೀಷನರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಐಜಿ (ಕಾರಾಗೃಹ), ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು, ಹೀಗೆ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಕೆ. ಎಡಿಜಿಪಿಯಾಗಿ ನಕ್ಸಲೀಯ ಚಟುವಟಿಕೆ ನಿಯಂತ್ರಣ ಮತ್ತು ಹುಬ್ಬಳ್ಳಿ-ಧಾರವಾಡದ ಈದ್ಗಾ ಮೈದಾನದ ವಿವಾದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಹಿರಿಮೆಗೆ ಪಾತ್ರರಾದವರು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು