Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವ ಬ್ರಿಗೇಡ್

ಕೆರೆಗಳ ಸಂರಕ್ಷಣೆ, ಕಲ್ಯಾಣಿಗಳ ಜೀರ್ಣೋದ್ದಾರದಂತಹ ಸಮಾಜಮುಖಿ ಕಾರ್ಯದಲ್ಲಿ ಅನವರತ ನಿರತವಾಗಿರುವ ಅಪ್ಪಟ ಕನ್ನಡ ಸಂಸ್ಥೆ ಯುವ ಬ್ರಿಗೇಡ್, ಯುವ ಸಮುದಾಯದ ಹೊಸ ಆಶಾಕಿರಣ.
ಯುವಕರ ಶಿಕ್ಷಣ, ಸಮಾಜದ ಸ್ವಾಸ್ಥ ರಕ್ಷಣೆ, ಸಾಮರಸ್ಯ ಕಾಪಾಡುವಿಕೆಯಂತಹ ಮಹತ್ತರ ಧೈಯಗಳೊಂದಿಗೆ ಸ್ಥಾಪಿತವಾದ ಸಂಸ್ಥೆ ‘ಯುವ ಬ್ರಿಗೇಡ್’, ಲೇಖಕ, ವಾಗ್ನಿ, ಸಮಾಜಮುಖಿ ಚಕ್ರವರ್ತಿ ಸೂಲಿಬೆಲೆ ಸ್ಥಾಪಿಸಿದ ಈ ಸಂಸ್ಥೆ ಅಲ್ಪಾವಧಿಯಲ್ಲಿ ಕೈಗೊಂಡ ಕೈಂಕರ್ಯಗಳು ಅನೇಕಾನೇಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಕೊಟ್ಟ ಕೊಡುಗೆ ಅಪಾರ. ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಕಲ್ಯಾಣಿಗಳ ಜೀರ್ಣೋದ್ದಾರ, ಕಾವೇರಿ, ನೇತ್ರಾವತಿ, ಭೀಮಾ, ಕಪಿಲೆ ಸೇರಿದಂತೆ ೮ ನದಿಗಳ ಸ್ವಚ್ಛಗೊಳಿಸುವಿಕೆ, ಮಳೆನೀರು ಸಂಗ್ರಹಣೆಯ ಮಹತ್ವ ಪಸರಿಸುವಿಕೆ, ಹುತಾತ್ಮ ಯೋಧರ ಸ್ಮರಣೆ, ಪ್ರವಾಹ ಪೀಡಿತರಿಗೆ ನೆರವು, ಕಾರ್ಗಿಲ್ ವಿಜಯ ದಿನದ ಆಚರಣೆ, ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿ, ಕನ್ನಡ ಕಲೆ, ಸಂಸ್ಕೃತಿ ಕುರಿತ ಪ್ರವಚನ-ನೃತ್ಯ ಮಾಲಿಕೆ, ಪರಭಾಷಿಕರಿಗೆ ಕನ್ನಡ ಕಲಿಸುವಿಕೆ, ಸ್ವಚ್ಛ ಭಾರತ ಯೋಜನೆಯ ಅನುಷ್ಠಾನ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಕೊರೊನಾ ಪೀಡಿತರು-ಸಂತ್ರಸ್ತರಿಗೆ ಮಾನವೀಯ ನೆರವು, ಗ್ರಾಮಸ್ವರಾಜ್ಯ ಕಲ್ಪನೆಯ ಸಾಕಾರ ಮುಂತಾದ ಹತ್ತಾರು ಸಮಾಜಸೇವಾ ಕಾರ್ಯಗಳಲ್ಲಿ ನಿರತವಾಗಿರುವ ಯುವ ಬ್ರಿಗೇಡ್ ನಾಡಿನ ಹೆಮ್ಮೆಯ ಮಾದರಿ ಯುವ ಸಂಸ್ಥೆ.