Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಿವಪ್ಪ ಭರಮಪ್ಪ ಅದರಗುಂಚಿ

ಕರ್ನಾಟಕ ಗ್ರಾಮೀಣ ರಂಗಭೂಮಿಯಲ್ಲಿ ನಾಲ್ಕು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ರಂಗಪ್ರಕಾರವನ್ನು ವಿಸ್ತರಿಸುತ್ತಿರುವ, ಕಲಾವಿದ, ರಂಗ ಸಂಘಟಕ ಶಿವಪ್ಪ ಭರಮಪ್ಪ ಅದರಗುಂಚಿ,

ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕೃತಿಕ ನಾಟ್ಯ ಸಂಘ, ಕಲಘಟಗಿ ಎಂಬ ಸಂಸ್ಥೆಯನ್ನು ಆರಂಭಿಸಿ, ಪೌರಾಣಿಕ ಐತಿಹಾಸಿಕ, ಭಕ್ತಿ ಪ್ರಧಾನ ಮತ್ತು ಸಾಮಾಜಿಕ ನಾಟಕಗಳನ್ನು ರಾಜ್ಯದುದ್ದಕ್ಕೂ ಅಭಿನಯಿಸುತ್ತಿರುವ ಶಿವಪ್ಪ ಅವರು ಅನೇಕ ನಾಟಕಗಳ ನಿರ್ದೇಶಕರು.

ರೇಣುಕಾ ಮಹಾತ್ಮ, ರಕ್ತರಾತ್ರಿ, ಜಗಜ್ಯೋತಿ ಬಸವೇಶ್ವರ, ಸಿಂಧೂರ ಲಕ್ಷ್ಮಣ ಮೊದಲಾದ ನೂರಾರು ನಾಟಕಗಳನ್ನು ಪ್ರಯೋಗಿಸಿರುವ ಇವರು ಗ್ರಾಮೀಣ ರಂಗಭೂಮಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.