Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್

ಕಲಾರಕ್ಷಣೆ ಮತ್ತು ಕಲಾವಿದರ ಪೋಷಣೆಯಲ್ಲಿ ಅವಿರತ ಶ್ರಮ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯದ್ದು. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಧೀಮಂತ ಸಂಸ್ಥೆ.
ಕರ್ನಾಟಕ ಕಲಾರಂಗದ ಪ್ರಮುಖ ಸಂಸ್ಥೆಯೆನಿಸಿರುವ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರುವಾಸಿ. ಬಹಮುಖ ಪ್ರತಿಭೆ ರಾಘವೇಂದ್ರ ಜೆ.ಪ್ರಭಾತ್‌ ಅವರ ಕಲ್ಪನೆಯ ಕೂಸು. ಆಧ್ಯಾತ್ಮ, ತತ್ವ, ಸಾಹಿತ್ಯ, ಸಂಗೀತ, ನೃತ್ಯ, ನೃತ್ಯನಾಟಕ, ಪತ್ರಿಕೋದ್ಯಮ. ಹೀಗೆ ಹತ್ತು ಹಲವು ಮುಖದ ಕಲೆಯ ಪರಿಚಯವಿರುವ ರಾಘವೇಂದ್ರ ಪ್ರಭಾತ್ ಪ್ರಖರ ವಾಗ್ನಿ, ರಂಗನಟ, ನಿರ್ದೇಶಕ ಮತ್ತು ನೃತ್ಯ ನಾಟಕಗಳ ರಚನಕಾರರು.ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಮೆರಿಕಾ, ಯುರೋಪ್, ಸಿಂಗಪುರ, ಮಲೇಷಿಯ ಮುಂತಾದ ಪೌರಾತ್ಯ ದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಪ್ರವಾಸ ಕೈಗೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ರಾಘವೇಂದ್ರದ ಹೆಗ್ಗಳಿಕೆ. ನೃತ್ಯ ಕ್ಷೇತ್ರಕ್ಕೆ ರಾಘವೇಂದ್ರರಂತೆ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯದ್ದು ಮಹತ್ವದ ಕೊಡುಗೆ. ಸಂಸ್ಥೆಯ ‘ಶ್ರೀ ಕೃಷ್ಣಕಮಲಾನಾಥ್’ ಎಂಬ ವರ್ಣವು ಜಗತ್ತಿನಾದ್ಯಂತ ಎಲ್ಲಾ ನರ್ತಕರು ಪ್ರದರ್ಶಿಸುವ ಜನಪ್ರಿಯ ಆಕೃತಿಯಾಗಿರುವುದು ವಿಶೇಷ. ಕಲಾವನದ ಮಂದಾರಪುಷ್ಟವಾಗಿ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ತನ್ನ ಸುಗಂಧವನ್ನೂ ಬೀರುತ್ತಲೇ ಇರುವುದು ಸಾಂಸ್ಕೃತಿಕ ಹೆಗ್ಗುರುತು.