Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಮೃತ ಶಿಶು ನಿವಾಸ ಸಂಸ್ಥೆ

ಅನಾಥ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮಾನವೀಯ ಕಾರ್ಯದಲ್ಲಿ ತನ್ಮಯವಾಗಿರುವ ಸಂಸ್ಥೆ ಅಮೃತ ಶಿಶು ನಿವಾಸ, ಸೇವಾಕಾರ್ಯದಲ್ಲಿ ಅಮೃತಮಹೋತ್ಸವವನ್ನು ದಾಟಿ ಮುನ್ನುಗ್ಗುತ್ತಿರುವ ದಯಾಕೇಂದ್ರ, ಬೆಂಗಳೂರಿನ ಬಸವನಗುಡಿಯ ಹೆಗ್ಗುರುತು ಅಮೃತ ಶಿಶು ನಿವಾಸ, ಅನಾಥ ಮಕ್ಕಳ ಲಾಲನೆ ಪಾಲನೆಗೆಂದೇ ೧೯೪೨ರಲ್ಲಿ ಸ್ಥಾಪಿತವಾದ ಸೇವಾಸಂಸ್ಥೆ (೧೯೪೫ರಲ್ಲಿ ಸೊಸೈಟಿಯಾಗಿ ನೋಂದಾಯಿಸ್ಪಟ್ಟಿದೆ. ಪಾರಸ್ಕಲ್ ಪಟೇಲ, ಸುಶೀಲಾ ಚಿಂತೋಪಂತ್‌, ಡಾ. ಶಂಕರಾಂಬಾಟ್ ಸಂಸ್ಥೆಯ ಸಂಸ್ಥಾಪಕರು. ಗಂಜಾಂ ಭೀಮಾಜ ಮತ್ತು ಎಂ.ಸಿ.ಜಯದೇವ್‌ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಪುಣ್ಯಾತ್ಮರು. ಸಮಾಜದಲ್ಲಿ ತ್ಯಜಿಸಲ್ಪಟ್ಟ ಹಾಗೂ ಅದೃಷ್ಟಹೀನ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವು ನೀಡುವುದು ಸಂಸ್ಥೆಯ ಮೂಲಗುರಿ. ಸಂಸ್ಥೆಯ ಸೇವಾಸತ್ಕಾರ್ಯವನ್ನು ೧೯೫೭ದಲ್ಲಿ ಅಂದಿನ ಮೈಸೂರು ಸರ್ಕಾರ ಬಸವನಗುಡಿಯಲ್ಲಿ ೨೫ ಗುಂಟೆ ಜಾಗವನ್ನು ನೀಡಿದ್ದು ವಿಶೇಷ. ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಸ್ಟೀಸ್ ಜುವೆನೈಲ್ ಆಕ್ಟ್ ಮೂಲಕ ಮಕ್ಕಳ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು ನೂರಾರು ಮಕ್ಕಳ ಬಾಳು ಬೆಳಗಿದೆ. ಪ್ರಸ್ತುತ ಶಿಶು ನಿವಾಸದಲ್ಲಿ ೫೦ ಮಕ್ಕಳು ಪಾಲನೆಯಲ್ಲಿದ್ದಾರೆ. ೧೮ ವರ್ಷದ ಬಳಿಕ ಮಕ್ಕಳಿಗೆ ಸ್ವಾವಲಂಬಿಗಳಾಗಲು ಕೌಶಲ್ಯ ತರಬೇತಿಯನ್ನೂ ನೀಡುತ್ತಿರುವ ಸಂಸ್ಥೆ ಬೆಂಗಳೂರಿನ ದೊಡ್ಡಮಾವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಬಾಲಕಿಯರ ವಸತಿ ನಿಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಅಮೃತಮಹೋತ್ಸವ ದಾಟಿ ೮೦ನೇ ವಸಂತಕ್ಕೆ ಕಾಲಿಟ್ಟಿರುವ ಈ ಮಕ್ಕಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದು ಸೇವೆಯ ಅನಂತ ರೂಪಕ್ಕೆ ಸಾಕ್ಷಿಯಾಗಿದೆ.