Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮುತ್ತಣ್ಣ ಪೂಜಾರ

ಕುರಿ ಹಿಂಡಿನೊಂದಿಗೆ ಊರೂರು ಸುತ್ತುವ ಪ್ರವೃತ್ತಿಯ ಮುತ್ತಣ್ಣ ಪೂಜಾರ್ ಕೆಲದಿನಗಳ ನಂತರ ಒಂದೇ ಕಡೆ ನೆಲೆ ನಿಂತು ಜಮೀನು ಖರೀದಿಸಿ ಬೇಸಾಯ ಆರಂಭಿಸಿ ಯಶಸ್ಸು ಗಳಿಸಿದವರು.
ಸತತ ಪರಿಶ್ರಮ ಹಾಗೂ ಹೊಸ ದಾರಿಗಳನ್ನು ಅರಿತುಕೊಂಡ ಮುತ್ತಣ್ಣ ಪೂಜಾ ಈಗ ಮುವ್ವತ್ತಾರು ಎಕರೆ ಭೂಮಿಯನ್ನು ನಂದನವನವನ್ನಾಗಿ ಮಾಡಿದ್ದು, ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಭತ್ತ, ಕಬ್ಬು, ತೋಟಗಾರಿಕೆ ಬೆಳೆಗಳು ಹಾಗೂ ಜೇನು,ಮೀನು ಸಾಕಾಣಿಕೆಯನ್ನು ಕೈಗೊಂಡಿದ್ದಾರೆ.
ರಸಗೊಬ್ಬರಗಳ ಬಳಕೆಯಿಂದ ದೂರವಿರುವ ಮುತ್ತಣ್ಣ, ತಮ್ಮ ಜಮೀನಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಮಾಡುವುದೇ ಅಲ್ಲದೆ, ನೂರಾರು ಕುರಿಗಳನ್ನು ಮೇಯಿಸಿ, ಅದರ ಹಿಕ್ಕೆಯನ್ನು ಬೇಸಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ.