Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಚಂದ್ರಶೇಖರ್ ವೈ. ಶಿಲ್ಪ

ಚಂದ್ರಶೇಖರ .ವೈ. ಶಿಲ್ಪಿ ಅವರು ಲೋಹ, ಶಿಲೆ ಹಾಗೂ ಕಾಷ್ಠ ಶಿಲ್ಪಿಗಳಾಗಿ ಹೆಸರು ಮಾಡಿದವರು. ಕಠಿಣ ಅಭ್ಯಾಸದಿಂದ ಶಿಲ್ಪಕಲೆಯಲ್ಲಿ ನೈಪುಣ್ಯತೆ ಪಡೆದ ಚಂದ್ರಶೇಖರ .ವೈ. ಶಿಲ್ಪಿ ಅವರು ದ್ವಾರಬಾಗಿಲುಗಳು, ದೇವರಮನೆ ಬಾಗಿಲು ಕೆತ್ತುವಲ್ಲಿ ಪರಿಣತರು. ಚಾಳುಕ್ಯ ಹಾಗೂ ರಾಷ್ಟ್ರಕೂಟ ಶೈಲಿಯಲ್ಲಿ ಶಾಸ್ತ್ರಬದ್ಧವಾದ ವಿಗ್ರಹಗಳ ರಚನೆಯಲ್ಲಿ ನೈಮಣ್ಯತೆ ಪಡೆದಿರುವ ಇವರು ದೇವಾನುದೇವತೆಗಳ ವಿಗ್ರಹಗಳ ಕೆತ್ತನೆಯಲ್ಲಿ ಖ್ಯಾತಿ ಪಡೆದಿದ್ದಾರೆ.

ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು ಇವರ ಅನೇಕ ಕೃತಿಗಳು ದೇಶ-ವಿದೇಶಗಳ ಅನೇಕ ಸಂಗ್ರಹಗಳಲ್ಲಿದ್ದು ಶಿಲ್ಪಕಲೆಯಲ್ಲಿ ಅನೇಕ ಯುವಜನರನ್ನು ಚಂದ್ರಶೇಖರ .ವೈ. ಶಿಲ್ಪಿಗಳು ಗುರುಕುಲ ಪದ್ಧತಿಯಲ್ಲಿ ತಯಾರು ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.