Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಬನ್ನೂರು ಕೃಷ್ಣಪ್ಪ

ಬೇಸಾಯ ಹೆಚ್ಚಿನ ಬಂಡವಾಳವನ್ನು ಬೇಡುವ ಈ ಕಾಲದಲ್ಲಿ ಶೂನ್ಯ ಬಂಡವಾಳದಿಂದ ನೈಸರ್ಗಿಕ ಬೆಳೆ ತೆಗೆದು ಆದಾಯ ಸಂಪಾದಿಸುವ ದೇಸೀಯ ಮಾರ್ಗವನ್ನು ಕಂಡುಕೊಂಡವರು ಬನ್ನೂರು ಕೃಷ್ಣಪ್ಪ.
ಸಹಜ ಕೃಷಿ ತಜ್ಞ ಸುಭಾಶ ಪಾಲೇಕಾರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಔಷಧೋಪಚಾರ ಹಾಗೂ ಗೊಬ್ಬರಗಳನ್ನು ಬಳಸಿ, ಸಹಜ ಕೃಷಿಯತ್ತ ಮರಳುವ ಮಾರ್ಗದಲ್ಲಿರುವ ಬನ್ನೂರು ಕೃಷ್ಣಪ್ಪ ಫಲವತ್ತಾದ ಭೂಮಿಗೆ ಯಾವುದೇ ಕುತ್ತಾಗದಂತೆ ಸಾವಯವ ಕೃಷಿಯಿಂದ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.