Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೀರಾ ಶ್ರೀನಿವಾಸ ಶಾನಭಾಗ

ಶ್ರೀಮತಿ ಮೀರಾ ಶ್ರೀನಿವಾಸ ಶಾನಭಾಗ ಅವರು ವೃತ್ತಿಜೀವನದ ಒತ್ತಡಗಳ ನಡುವೆಯೂ ಸಾಮಾಜಿಕ ಸೇವಾ ಕಾರ್ಯವನ್ನು ಪ್ರವೃತ್ತಿಯಾಗಿ ಕೈಗೊಂಡವರು. ನಿವೃತ್ತಿಯ ನಂತರ ಪೂರ್ಣ ವೇಳೆಯನ್ನು ಸಮಾಜದ ಕೈಂಕರ್ಯದಲ್ಲಿ ತೊಡಗಿಸಿದ್ದಾರೆ.
ಸ್ವಂತ ಜಮೀನನ್ನು ಸಾರ್ವಜನಿಕ ಕಾರ್ಯಗಳಿಗೆ ದಾನ ನೀಡಿರುವುದೇ ಅಲ್ಲದೆ ಜನರಲ್ಲಿ ಧಾರ್ಮಿಕ ಚಿಂತನೆಗಳನ್ನು ರೂಢಿಸುವ ಸಲುವಾಗಿ ಮಠ, ಮಂದಿರಗಳನ್ನು ಸ್ಥಾಪಿಸಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ನೆರವಾಗುತ್ತಿರುವ ಮೀರಾ ಶಾನಭಾಗ ಜೀವನ ಸಂಧ್ಯಾಕಾಲದಲ್ಲಿ ಗೌರವದ ಬದುಕನ್ನು ಬಾಳಲು ಅನುವಾಗುವಂತೆ ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ.
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಮೀರಾ ಅವರು ಸಮಾಜದ ಮೂಲ ಅವಶ್ಯಕತೆಗಳಾದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.