Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಫಕೀರಡ್ಡೆಪ್ಪ ಭೀ. ಗದ್ದಿಕೇರಿ

ಸ್ವಾತಂತ್ರ್ಯ ಚಳುವಳಿ ಹಾಗೂ ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಪಾಲುಗೊಂಡು ಗಾಂಧೀ ಪ್ರಣೀತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ತಮ್ಮ ಗ್ರಾಮದಲ್ಲೇ ಖಾದಿ ಉದ್ಯೋಗ ಕೇಂದ್ರ ಸ್ಥಾಪಿಸಿ ಯುವಕರಿಗೆ ದುಡಿಯಲು ಅವಕಾಶ ಒದಗಿಸಿದವರು ಕೃಷಿಕ ಗದ್ದಿಕೇರಿ ಅವರು
ಅಕ್ಷರ ವಂಚಿತ ಬಡಮಕ್ಕಳ ವಿದ್ಯಾರ್ಜನೆಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದೆ ಅಲ್ಲದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಡವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಪ್ರವೇಶ ದೊರಕಿಸಿಕೊಟ್ಟು ಅವರ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟವರು ಫಕೀರಡ್ಡೆಪ್ಪ ಭೀಮರಡ್ಡೆಪ್ಪ ಗದ್ದಿಕೇರಿ.
ತಮ್ಮ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹಣವನ್ನು ಗದ್ದಿಕೇರಿ ಅವರು ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ದಾಸೋಹಕ್ಕಾಗಿ ನೀಡಿದೇ ಅಲ್ಲದೆ ಸ್ವಾವಲಂಬನೆಯ ಉದ್ಯೋಗ ನಡೆಸಿಕೊಳ್ಳಲು ಆರ್ಥಿಕ ನೆರವು ನೀಡುವಲ್ಲಿ ಸಹಾಯ ಮಾಡಿರುವುದು ಅನುಕರಣೀಯ.