Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಲಕ್ಷ್ಮೀ ರಾಮಪ್ಪ

ಲಕ್ಷ್ಮೀ ರಾಮಪ್ಪ ಅವರು ಕಳೆದ ೪೦ ವರ್ಷಗಳಿಂದ ಅವರ ವಂಶ ಪರಂಪರೆಯಾದ ಹಸೆ ಚಿತ್ತಾರವನ್ನು ಹಸೆಗೋಡೆ ಚಿತ್ತಾರ, ತೇರಿನ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಭತ್ತದಿಂದ ಮಾಡುವ ತೋರಣ, ಗೂಡು, ಅರಳಿಎಲೆ, ಜುಮುಕಿ ಹಾಗೂ ಕಳಸದಕಡಿ, ವಿವಿಧ ಕಲಾಕೃತಿಗಳ ನಿರ್ಮಾಣ ಮತ್ತು ಸೋಬಾನೆ ಪದ, ಭತ್ತ ಕಟ್ಟುವ ಹಾಡು, ಬೀಡುವ ಹಾಡು, ನಾಟ ಹಾಡು, ದೀಪಾವಳಿ ಹಾಗೂ ಗೌರಿ-ಗಣೇಶ ಹಬ್ಬದ ಹಾಡುಗಳನ್ನು ಹಾಡುತ್ತಾರೆ.

ಚಿತ್ತಾರ ಕಲೆಯ ಜೊತೆಗೆ ಗ್ರಾಮ್ಯ ಜಗತ್ತಿನಲ್ಲಿ ಜನಪ್ರಿಯವಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಲಕ್ಷ್ಮಿ ರಾಮಪ್ಪ ಅವರ ಕಲಾ ಪ್ರತಿಭೆಯನ್ನು ಗುರುತಿಸಿ ಹಲವಾರು ಗೌರವ ಪುರಸ್ಕಾರಗಳು ಲಭಿಸಿವೆ.