Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಹೆಚ್.ಎಲ್. ಕೇಶವಮೂರ್ತಿ

ಮಂಡ್ಯ ಶೈಲಿಯ ಭಾಷೆಯನ್ನು ಬಳಸಿಕೊಂಡು ಹಾಸ್ಯ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟ ಎಚ್.ಎಲ್.ಕೇಶವಮೂರ್ತಿ ಅವರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಿಸುವ ಇವರು ಸಮಕಾಲೀನ ಸಮಸ್ಯೆಗಳನ್ನು ಹಾಸ್ಯದ ಮೂಲಕ ಉಣ ಬಡಿಸುವಲ್ಲಿ ಸಿದ್ಧಹಸ್ತರು. ಲಂಕೇಶ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಎಚ್.ಎಲ್.ಕೇಶವಮೂರ್ತಿ ರೈತ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ನಗುವ ಗುಳಿಗೆಗಳನ್ನು ಬರಹಗಳ ಮೂಲಕ ಮನಸ್ಸಿನಾಳಕ್ಕೆ ಇಳಿಸುವ ಮಂಡ್ಯ ಆಡುಭಾಷೆಯಲ್ಲಿ ಕೇಶವ ಮೂರ್ತಿಯವರು ರಾಜಕೀಯ ವಿಡಂಬನೆಗಳನ್ನು ಹೆಚ್ಚು ಬರೆದಿದ್ದಾರೆ.
ಜನಪರ ಆಂದೋಲನಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಆಕರ್ಷಕವಾಗಿ ನಗೆಯುಕ್ಕಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಇವರ ಅನೇಕ ಹಾಸ್ಯ ಬರೆಹ ಸಂಕಲನಗಳು ಪ್ರಕಟವಾಗಿವೆ.