Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ವೀರೇಂದ್ರ ಸಿಂಪಿ

ಲಲಿತ ಪ್ರಬಂಧಗಳ ಮೂಲಕ ನಾಡಿನ ಗಮನ ಸೆಳೆದಿರುವ ವೀರೇಂದ್ರ ಸಿಂಪಿ ಅವರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರು. ಕಾಲೇಜು ದಿನಗಳಲ್ಲಿಯೇ ಕಥೆ, ಅನುವಾದಗಳಲ್ಲಿ ಆಸಕ್ತಿ ಹೊಂದಿದ್ದ ಇವರು ನಂತರ ಲಲಿತ ಪ್ರಬಂಧ ರಚನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು.
ಅನೇಕ ಪ್ರಬಂಧ ಕೃತಿಗಳನ್ನು ಬರೆದಿರುವ ವೀರೇಂದ್ರ ಸಿಂಪಿ ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಹಲವು ಇಂಗ್ಲಿಷ್ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಇವರು ಅನೇಕ ಜಿಲ್ಲಾ ದರ್ಶನಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿಗಳ ಜೀವನಚರಿತ್ರೆಯನ್ನು ಬರೆದಿರುವ ಸಿಂಪಿಯವರು ರಚಿಸಿದ ಕೃತಿಗಳು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಾಗಿವೆ. ಇವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ವಿಶ್ವವಿದ್ಯಾಲಯಗಳು ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.