Categories
ಮಾಹಿತಿ ತಂತ್ರಜ್ಞಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅನಂತ್ ಕೊಪ್ಪ‌ರ್‌

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿರುವ ಗ್ರಾಮೀಣ ಪ್ರತಿಭೆ ಶ್ರೀ ಅನಂತ್ ಕೊಪ್ಪ‌ರ್‌ ಅವರು.
ಗದಗ ಜಿಲ್ಲೆಯ ಹಿಂದುಳಿದ ಗ್ರಾಮದಲ್ಲಿ ಜನನ, ಖರಗ್‌ಪುರ್‌ನ ಐಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ. ಬಳಿಕ ಅವರು ತಮ್ಮ ವೃತ್ತಿ ಬದುಕು ಆರಂಭಿಸಿದುದು ವಿಪ್ರೋ ಸಂಸ್ಥೆಯಲ್ಲಿ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವರು.
ಮುಂದೆ ಕೆಲ ಕಾಲ ಟಾಟಾ ಎಲ್ಲಿ ಮತ್ತು ಬಿಎಫ್‌ಎಲ್ ಸಾಫ್ಟ್‌ವೇರ್ ಸಂಸ್ಥೆಯಲ್ಲಿಯೂ ಕೆಲಸ ಮಾಡಿದ ಅವರು ೧೯೯೭ರಲ್ಲಿ ತಮ್ಮದೇ ಕ್ಷೇಮಾ ಟೆಕ್ನಾಲಜೀಸ್ ಸಂಸ್ಥೆ ಸ್ಥಾಪಿಸಿದರು. ಇಂದು ಕ್ಷೇಮಾ ಟೆಕ್ನಾಲಜೀಸ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿರುವ ಸಂಸ್ಥೆ.
೨೦೦೪ರಲ್ಲಿ ಎಂಫಸಿಸ್‌ನ ಜೊತೆ ವಿಲೀನಗೊಳ್ಳುವ ಮೊದಲು ಕ್ಷೇಮಾ ಟೆಕ್ನಾಲಜೀಸ್ ಸಂಸ್ಥೆಯು ಇಂಡಸ್ಟ್ರಿಯಲ್ ಆಟೋಮೇಷನ್, ಹೆಲ್ತ್‌ಕೇ‌, ಲೈಫ್ ಸೈನ್ಸ್, ಮೊಬೈಲ್ ಟೆಲಿಫೋನಿ ಮತ್ತಿತರ ಸಂಸ್ಥೆಗಳಿಗೂ ಸೇವೆಯನ್ನು ಒದಗಿಸುತ್ತಿತ್ತು.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಇನ್ಸ್‌ಟಿಟ್ಯೂಟ್‌ನಿಂದ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪ್ರೋಫೆಷನಲ್ ಗೌರವಕ್ಕೆ ಪಾತ್ರರಾದ ಪ್ರಥಮ ಸಿಇಒ, ಗದಗ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯು ‘ಅತ್ಯುತ್ತಮ ಉದ್ಯಮಿ’ ಗೌರವ ಸಲ್ಲಿಸಿದರೆ, ೧೯೯೯ರಲ್ಲಿ ಯುವ ಉದ್ಯಮಿಗಳ ಏಷ್ಯಾ ಸಮ್ಮೇಳನದಲ್ಲಿ ವಿಶೇಷ ಉದ್ಯಮಿ ಗೌರವ.
ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮತ್ತು ಪಿಎಂಐ ಬೆಂಗಳೂರು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅನಂತ್ ಕೊಪ್ಪ‌ರ್‌ ಪ್ರಸ್ತುತ ಬೆಂಗಳೂರಿನ ನಿವಾಸಿ.