Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಅಲ್ಯಾಂಬ ಪಟ್ಟಾಭಿ

ಕನ್ನಡದ ಹಿರಿಯ ಬರಹಗಾರ್ತಿಯರಲ್ಲಿ ಒಬ್ಬರಾದ ಆಲ್ಯಾಂಬ ಪಟ್ಟಾಭಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕ ಪದವೀಧರರು. ಸಾಹಿತ್ಯದಲ್ಲಿ ಬೃಹತ್ ಕಾದಂಬರಿಯೊಂದಿಗೆ ಕಾಲಿಟ್ಟ ಆರಾಂಬ ಅವರು ಈವರೆಗೆ ೩೪ ಕಾದಂಬರಿಗಳನ್ನು ರಚಿಸಿದ್ದಾರೆ.
ಜನಪ್ರಿಯ ಕಾದಂಬರಿಗಳನ್ನು ನೀಡುವುದರ ಜೊತೆಗೆ ನೂರಾರು ಸಣ್ಣ ಕತೆಗಳನ್ನು ರಚಿಸಿದ ಹಿರಿಮೆ ಆರಾಂಬ ಅವರದು. ಶಿಶು ಸಾಹಿತ್ಯದಲ್ಲಿಯೂ ಕೆಲಸ ಮಾಡಿರುವ ಇವರು ಹನ್ನೆರಡು ಶಿಶು ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಕನ್ನಡವೇ ಅಲ್ಲದೆ ದಕ್ಷಿಣದ ಎಲ್ಲ ಭಾಷೆಗಳಲ್ಲಿಯೂ ಚಲನಚಿತ್ರಗಳಾಗಿ ಮೂಡಿ ಬಂದಿವೆ.
ಸ್ವತಃ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳ ನಿಪುಣೆಯಾದ ಆಲ್ಯಾಂಬ ಪಟ್ಟಾಭಿಯವರು ಟೆನ್ನಿಸಿನಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರಲ್ಲದೆ ಟೆನಿಸ್ ಕುರಿತಂತೆ ಮಾಹಿತಿ ಪೂರ್ಣ ಕೃತಿಯೊಂದನ್ನು ಅವರು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.