Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಪೂಜಾಲ ನಾಗರಾಜ್

ನಾಲ್ಕು ತಲೆಮಾರುಗಳಿಂದ ಕರಗ ಹೊರುವ ಕಾಯಕವನ್ನೂ ನಡೆಸಿಕೊಂಡು ಬರುತ್ತಿರುವ ಕುಟುಂಬ ಕುಡಿಯಾದ ನಾಗರಾಜ್ ಬಾಲ್ಯದಿಂದಲೇ ಕರಗ ಧಾರ್ಮಿಕ ಕಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದರೂ ಕರಗ ಹೊರುವುದನ್ನು ಆರಂಭಿಸಿದ್ದು ತಮ್ಮ ೧೮ನೇ ವಯಸ್ಸಿನಲ್ಲಿ.

ನಾಲ್ಕು ದಶಕಗಳಿಂದ ನೂರಾರು ಸ್ಥಳಗಳಲ್ಲಿ ಕರಗಹೊರುವ ಪರಿಪಾಠವನ್ನು ರೂಢಿಸಿಕೊಂಡು ಬಂದಿರುವ ನಾಗರಾಜ್ ಆರಾಧನಾ ಕಲೆಯಾದ ಕರಗ ಶಕ್ಯುತ್ಸವವನ್ನು ಅತ್ಯಂತ ನೇಮ ನಿಷ್ಠೆಗಳಿಂದ ಆಚರಿಸುತ್ತಾ ಬಂದಿದ್ದಾರೆ. ತಂದೆ ಪ್ರಸಿದ್ದ ಕರಗ ಪೂಜಾರಿ ಮುನಿಸ್ವಾಮಿ ಅವರೊಂದಿಗೆ ಕರಗಹೊರುವುದನ್ನು ಕಲಿತ ನಾಗರಾಜ್ ಕರಗಕ್ಕೆ ಬೇಕಾದ ಎಲ್ಲಾ ಪೂರಕ ತಯಾರಿಗಳನ್ನು ಮಾಡುವ ಕೌಶಲ್ಯವನ್ನು ರೂಢಿಸಿಕೊಂಡಿದ್ದಾರೆ. ಮಲ್ಲಿಗೆ ಹೂವಿನಿಂದ ಪ್ರಸಿದ್ಧವಾಗುವ ಕರಗಕ್ಕೆ ಅನೇಕ ರೀತಿಯ ಆಕರ್ಷಕ ಅಲಂಕಾರಗಳನ್ನು ಮಾಡುವ ನಾಗರಾಜ್ ಶಾಸ್ತ್ರೀಯ ಸಂಗೀತವನ್ನು ತಿಳಿದುಕೊಂಡಿದ್ದಾರೆ. ತಮಟೆ, ನಾದಸ್ವರ ಹಾಗೂ ಬ್ಯಾಂಡ್ ಸಂಗೀತಕ್ಕೆ ಆಕರ್ಷಕವಾಗಿ ಕರಗನೃತ್ಯ ಮಾಡುವ ನಾಗರಾಜ್ ಅವರು ಜೀವನೋಪಾಯಕ್ಕಾಗಿ ನಂಬಿರುವುದು ಬೇಸಾಯವನ್ನು.