Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿನದತ್ತ ದೇಸಾ

ಕಾವ್ಯ ಸೃಷ್ಠಿಯನ್ನು ಅತ್ಯಂತ ಸುಲಲಿತವಾಗಿ ಜನಮನ ಮುಟ್ಟುವಂತೆ ರೂಪಿಸಿರುವ ಜಿನದತ್ತ ದೇಸಾಯಿಯವರು ಈವರೆಗೆ ಹದಿನೇಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಾವ್ಯದೊಂದಿಗೆ ಏಳು ಸಾಹಿತ್ಯ ಕೃತಿಗಳನ್ನು ಸಂಪಾದಿಸಿರುವ ದೇಸಾಯಿಯವರ ಲೇಖನಿಯಲ್ಲಿ ಈವರೆಗೆ ಒಡಮೂಡಿರುವ ಕೃತಿಗಳು ಇಪ್ಪತ್ನಾಲ್ಕು. ಸಾಹಿತ್ಯ ರಚನೆಯ ಜೊತೆಜೊತೆಯಲ್ಲಿಯೇ ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಇಳಿವಯಸ್ಸಿನ ಜಿನದತ್ತ ದೇಸಾಯಿಯವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನ, ದಕ್ಷಿಣ ಭಾರತ ಜೈನ ಸಭಾ ನೀಡುವ ಆಚಾರ್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಕಾಂತಾವರ ಕರ್ನಾಟಕ ಸಂಘದ ೨೦೧೦ನೆ ಸಾಲಿನ ವಾರ್ಷಿಕ ಗೌರವವೂ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕದ ಗಡಿನಾಡಿನಲ್ಲಿ ನಾಡು-ನುಡಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ರಚಿಸಿರುವ ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಜಿನದತ್ತ ದೇಸಾಯಿಯವರು ಸೇವೆ ಸಲ್ಲಿಸಿದ್ದಾರೆ.