Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕೆ. ಕರಿಯಪ್ಪ ಮಾಸ್ತರ್

ಹಿಂದೂಸ್ಥಾನಿ, ಸುಗಮ ಸಂಗೀತಗಳಲ್ಲಿ ನಿಪುಣರಾದ ಕೆ.ಕರಿಯಪ್ಪ ಮಾಸ್ತರ್ ಉತ್ತಮವಾದ ಹಾರ್ಮೋನಿಯಂ ವಾದಕರೂ ಕೂಡ. ತಮ್ಮ ಕಲಾನಿಕೇತನ ಸಂಗೀತ ವಿದ್ಯಾಲಯದ ಮೂಲಕ ಸಂಗೀತ ಶಿಕ್ಷಣ ನೀಡುತ್ತಿರುವ ಕರಿಯಪ್ಪ ‘ಸಂಗೀತ ಸಿಂಚನ ಎಂಬ ತಂಡದ ಮುಖೇನ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಸಂಗೀತ ಶಿಕ್ಷಣದ ಜೊತೆಗೆ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಇವರು ಅನೇಕ ಧ್ವನಿಸುರುಳಿಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ತತ್ವಪದ, ದಾಸರಪದ, ಹಾಗೂ ವಚನ ಗಾಯನಗಳಲ್ಲಿಯೂ ನೈಪುಣ್ಯತೆ ಪಡೆದಿರುವ ಕರಿಯಪ್ಪ ಮಾಸ್ತ ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಮೈಸೂರಿನ ರಂಗಾಯಣದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವ ಕರಿಯಪ್ಪ ಮಾಸ್ಟರ್ ಅವರಿಗೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಸಂದಿದೆ.