Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಎಸ್. ಮರಿಸ್ವಾಮಿ

ಶಿಲ್ಪಕಲಾ ಶಿಕ್ಷಣವನ್ನು ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಪಡೆದುಕೊಂಡ ಎಸ್. ಮರಿಸ್ವಾಮಿ ಯವರು ವಿವಿಧ ಬಗೆಯ ವೈವಿಧ್ಯಮಯ ಶಿಲ್ಪಗಳನ್ನು ರೂಪಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.
ಈ ವರೆಗೂ ೧೨೦ ಕ್ಕೂ ಹೆಚ್ಚು ದೇವಾನುದೇವತೆಗಳ ಹಾಗೂ ಸಾಮಾಜಿಕ ಪರಿವರ್ತಕರ ಶಿಲ್ಪಗಳನ್ನು ಕೆತ್ತಿದ್ದು ಇದಕ್ಕಾಗಿ ಅನೇಕ ಬಹುಮಾನ ಹಾಗೂ ಗೌರವ ಪುರಸ್ಕಾರಗಳನ್ನು ಎಸ್. ಮರಿಸ್ವಾಮಿ ಪಡೆದಿದ್ದಾರೆ.
ವೈವಿಧ್ಯಮಯವಾದ ಶಿಲ್ಪಗಳನ್ನು ಸೃಷ್ಟಿಸುವಲ್ಲಿ ಕೌಶಲ್ಯ ಪಡೆದಿರುವ ಸಾತನೂರಿನ ಶಿಲ್ಪಿ ಎಸ್.ಮರಿಸ್ವಾಮಿಯವರಿಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಡಾ|| ಬಿ. ಆರ್. ಅಂಬೇಡ್ಕರ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.