ಕರ್ನಾಟಕದಲ್ಲಿ ಸಂಜೆ ದಿನಪತ್ರಿಕೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ವಿಶೇಷ ಶೈಲಿಯ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಕೀರ್ತಿವಂತರು ಶ್ರೀ ಬಿ ಎಸ್ ಮಣಿ ಅವರು.
ಸಂಜೆವಾಣಿ ದಿನಪತ್ರಿಕೆ ಶ್ರೀ ಬಿ ಎಸ್ ಮಣಿ ಅವರ ಕಲ್ಪನೆಯ ಕೂಸು ಇಂದು ಪ್ರಬುದ್ಧವಾಗಿ ಬೆಳೆದು ನಿಂತಿದೆ. ಕರ್ನಾಟಕದ ನಾಲ್ಕು ನಗರಗಳಲ್ಲಿ ಏಕಕಾಲಕ್ಕೆ ಪ್ರಕಟವಾದ ಪ್ರಥಮ ಸಂಜೆ ದಿನಪತ್ರಿಕೆ ಎಂಬ ಪ್ರಸಿದ್ಧಿಯನ್ನು ಪಡೆಯುವಲ್ಲಿ ಶ್ರೀ ಮಣಿಯವರ ಶ್ರಮ ಅಪಾರವಾಗಿದೆ.
ಸಾಮಾನ್ಯ ಜನರೂ ಓದುವ ಹವ್ಯಾಸವನ್ನು ಮಣಿಯವರ ಪ್ರತಿಪಾದನೆ. ಅಂತೆಯೇ ತಮ್ಮ ತಂದುಕೊಟ್ಟರು.
ಮೈಗೂಡಿಸಿಕೊಳ್ಳಲು ಸುದ್ದಿಗಳು ಸರಳಭಾಷೆಯಲ್ಲಿರಬೇಕು ಎಂಬುದು ಪತ್ರಿಕೆಯಲ್ಲಿ ಸರಳ ಭಾಷೆ ಬಳಸಿದರು. ಪತ್ರಿಕೆಗೆ ಜನಪ್ರಿಯತೆಯನ್ನು
‘ಚಂದನ’ ವಾರಪತ್ರಿಕೆಯನ್ನು ಪ್ರಾರಂಭಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಿದ ಕೀರ್ತಿ ಇವರದು. ‘ಚೇತನ’ ಮಾಸಿಕದಲ್ಲಿ ಪ್ರಸಿದ್ಧ ಕಾದಂಬರಿಗಳನ್ನು ಪ್ರಕಟಿಸಿ ಜನಸಾಮಾನ್ಯರೂ ಕೊಂಡು ಓದುವ ಹವ್ಯಾಸವನ್ನು ಬೆಳೆಸಿದರು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಪಿಟ್ಟರ್ ಲ್ಯಾಂಡ್, ಸ್ವೀಡನ್, ಆಸ್ಟ್ರಿಯ, ಇಟಲಿ, ಅಮೆರಿಕ, ಕೆನಡಾ, ಸಿಂಗಪೂರ್, ಮಲೇಷಿಯಾ, ಥೈಲಾಂಡ್, ತೈವಾನ್ ಮುಂತಾದ ದೇಶಗಳಿಗೆ ಭೇಟಿ ಇತ್ತಿರುವ ಶ್ರೀಯುತರು ಅಪಾರ ಜೀವನಾನುಭವ ಗಳಿಸಿಕೊಂಡಿದ್ದಾರೆ.
ಪತ್ರಿಕಾ ರಂಗದಲ್ಲಿ ಹೊಸ ಹಾದಿ ತುಳಿದು, ಯಶಸ್ವಿಯಾದ ಗಣ್ಯ ಪತ್ರಿಕೋದ್ಯಮಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಶ್ರೀ ಬಿ ಎಸ್ ಮಣಿ ಅವರು.