Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ಶ್ಯಾಮಸುಂದರ್

ಹಳ್ಳಿಗಾಡಿನ ಆಗುಹೋಗುಗಳನ್ನು ಸಮರ್ಥವಾಗಿ ವರದಿ ಮಾಡುವ ಪತ್ರಕರ್ತರಲ್ಲಿ ಬಳ್ಳಾರಿಯ ಶ್ರೀ ಎಸ್. ಶ್ಯಾಮಸುಂದರ್ ಅವರೂ ಒಬ್ಬರು.
ಇಂಗ್ಲೀಷ್‌ನಲ್ಲಿ ಸ್ನಾತಕಪದವಿ ಪಡೆದು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಎಸ್‌. ಶ್ಯಾಮಸುಂದರ್‌ ೧೯೮೧ರಿಂದ ಬಳ್ಳಾರಿಯಲ್ಲಿ ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳ ವರದಿಗಾರರಾಗಿದ್ದರು. “ಭಟ್ಟಿ ಸಾರಾಯಿಗೂ ಬ್ಯಾಂಕ್‌ ಸಾಲ”, “ಬಳ್ಳಾರಿ ಬಂದೂಕಿನ ಪೂರ್ವೋತ್ತರ” “ಕುಷ್ಠ ಆಯುರ್ವೇದ ನಿವಾರಿಸಬಲ್ಲ ಅನಿಷ್ಠ” ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ಆಸಕ್ತಿ ಪೂರ್ಣ ವರದಿಗಳನ್ನು ನೀಡಿರುವ ಶ್ಯಾಮಸುಂದರ್ ಈಗ ಬಳ್ಳಾರಿಯಲ್ಲಿ ವಿಜಯ ಟೈಂಸ್‌ನ ಹಿರಿಯ ವರದಿಗಾರ, ಕರ್ನಾಟಕ ಮಾದ್ಯಮ ಅಕಾಡಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಎಸ್. ಶ್ಯಾಮಸುಂದರ್ ಮಾನವೀಯ ವರದಿಗೆ ಒತ್ತುಕೊಟ್ಟವರು.