Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೃಷ್ಣಮೂರ್ತಿ ಹೆಗಡೆ

ಕನ್ನಡ ಪತ್ರಿಕೋದ್ಯಮದ ಮೈಲಿಗಲ್ಲು ಎನಿಸಿದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಹುಬ್ಬಳ್ಳಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವವರು ಕೃಷ್ಣಮೂರ್ತಿ ಹೆಗಡೆ ಅವರು.
೧೯೫೧ರಲ್ಲಿ ಜನನ. ೧೯೭೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕಳೆದ ೩೧ ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಸೇವಾ ನಿರತರು. ದೈನಂದಿನ ಆಗು-ಹೋಗುಗಳು ಸೇರಿದಂತೆ ಜನಸಾಮಾನ್ಯರ ಮೇಲೆ ಬೆಳಕು ಚೆಲ್ಲುವಂತಹ ವರದಿಗಾರಿಕೆ ಸೇರಿದಂತೆ ಶ್ರೀಯುತರು ಸಾಹಿತ್ಯ, ರಾಜಕೀಯ ವರದಿಗಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
೧೯೭೪ರಲ್ಲಿ ನಾಡಿನ ಪ್ರಮುಖ ಪತ್ರಿಕೆ ‘ವಿಕ್ರಮ’ದ ಪತ್ರಿಕೆಗೆ ಸೇರುವ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭ, ಬಳಿಕ ಪ್ರತಿಷ್ಠಿತ ರಾಷ್ಟೋತ್ಥಾನ ಪರಿಷತ್ತಿನ ಪ್ರಕಟಣೆಯಾದ ‘ಉತ್ಥಾನ’ ಮಾಸಿಕ ಪತ್ರಿಕೆಯಲ್ಲಿ ಉಪಸಂಪಾದಕ ಹುದ್ದೆ. ೧೯೭೭ರಲ್ಲಿ ಬೆಂಗಳೂರಿನ ‘ಪ್ರಜಾ ಪ್ರಭುತ್ವ ವಾರಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ ಕಾರ್ಯನಿರ್ವಹಣೆ. ಕೆಲ ದಿನಗಳ ಬಳಿಕ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ವರದಿಗಾರ ಹುದ್ದೆಯ ಅಲಂಕಾರ.
ಸದ್ಯಕ್ಕೆ ‘ಸಂಯುಕ್ತ ಕರ್ನಾಟಕ’ದ ಸ್ಥಾನಿಕ ಸಂಪಾದಕರಾಗಿ ಕೃಷ್ಣಮೂರ್ತಿ ಹೆಗಡೆ ಅವರು ಸೇವೆ ಸಲ್ಲಿಸುತ್ತಿರುವರು.