Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್‌.ಆರ್. ಶ್ರೀಶಾ

ಪತ್ರಿಕೋದ್ಯಮದಲ್ಲಿ ‘ಕರೆಂಟ್ ಮಾತು’ನಿಂದಲೇ ಹೆಸರಾದ ಹಿರಿಯ ವಿಷಯತಜ್ಞ ಪತ್ರಕರ್ತರು ಎಚ್‌.ಆರ್.ಶ್ರೀಶಾ, ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೫೧ರಲ್ಲಿ ಜನಿಸಿದ ಶ್ರೀಶ ಕನ್ನಡ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು. ಖಾದ್ರಿ ಶಾಮಣ್ಣರ ಗರಡಿಯಲ್ಲಿ ಪಳಗಿದ ಪತ್ರಕರ್ತರು, ಹಾಸನದ ಜನಮಿತ್ರ, ಸಂಯುಕ್ತಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕದಲ್ಲಿ ಪತ್ರಿಕಾಸೇವೆ. ವಿಷಯತಜ್ಞರು ವಿರಳವಾಗುತ್ತಿರುವ ಪತ್ರಿಕಾರಂಗದಲ್ಲಿ ಎಚ್.ಆರ್.ಶ್ರೀಶ ಅವರದ್ದು ವಿಶೇಷ ಹೆಸರು. ವಿದ್ಯುತ್ ಕ್ಷೇತ್ರದ ಬಗ್ಗೆ ಅವರದ್ದು ತಳಸ್ಪರ್ಶಿ ಅಧ್ಯಯನ, ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೇ ಸರಳ, ಪದಗಳಂತೆ ಮಾತು ಮೃದು. ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳು ಬರೆದ ಲೇಖನಸರಮಾಲೆಗೆ ಲೆಕ್ಕವಿಲ್ಲ. ಸರ್ಕಾರದ ಕಣ್ಣಿರೆಸಿದವರು. ಜನಪ್ರಿಯ ಕರೆಂಟ್ ಮಾತು’ ಅಂಕಣಕಾರರು. ಕೆಇಆರ್‌ಸಿ, ಕೆಪಿಸಿಎಲ್‌ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್‌ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು. ವಾದ-ವಿವಾದಗಳಲ್ಲದೇ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಅಪ್ಪಟ ಪತ್ರಿಕಾಜೀವಿ.