Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ

ಮುಂಬಯಿ ನೆಲದಲ್ಲಿ ಕನ್ನಡದ ಕೀರ್ತಿ ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ ಕುಸಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ಉದ್ಯಮ-ಸಮಾಜಸೇವಾ ಕ್ಷೇತ್ರದ ಸಾಧನಾಶೀಲರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಚೆಲ್ಲಡ್ಕ ಗುತ್ತು ಹುಟ್ಟೂರು, ತಾಯ್ಕೆಲದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಂಬಯಿಯಲ್ಲಿ ವಾಣಿಜ್ಯ ಪದವಿ. ಶಿಪ್ಪಿಂಗ್ ಕಂಪನಿಯಲ್ಲಿ ವೃತ್ತಿ ಬದುಕಿನಾರಂಭ. ಸತತ ೨೮ ವರ್ಷಗಳ ಕಾಲ ವಿವಿಧ ಶಿಪ್ಪಿಂಗ್ ಕಂಪನಿಗಳಲ್ಲಿ ಗುರುತರ ಸೇವೆ. ೨೦೦೭ರಲ್ಲಿ ಸ್ವಂತದ್ದೇ ಭವಾನಿ ಶಿಪ್ಪಿಂಗ್ ಸರ್ವಿಸಸ್ ಕಂಪನಿ ಆರಂಭ. ಮುಂದಿನದು ಅಪ್ರತಿಮ ಯಶೋಗಾಥೆ, ದೇಶದ ೧೮ ವಲಯಗಳಲ್ಲಿ ಕಛೇರಿಗಳು, ನಾಲ್ಕು ವಿದೇಶಗಳಲ್ಲಿ ಶಿಪ್ಪಿಂಗ್ ಲೈನ್ಗಳು, ಶಿಪ್ಪಿಂಗ್ ಉದ್ಯಮದಲ್ಲಿ ಅಚ್ಚರಿಯ ಸಾಧನೆ. ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಹಿರಿಮೆ. ಅಬಲ ಹೆಣ್ಣುಮಕ್ಕಳ ವಿವಾಹಕ್ಕೆ ನಿರಂತರ ನೆರವು, ಸಾಮಾಜಿಕ ಕಾರ್ಯಗಳಲ್ಲಿ ನಿಸ್ಪೃಹ ನಡೆ, ಶಿಪ್ಪಿಂಗ್ ನೋಬಲ್, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಂದ ಭೂಷಿತರಾದ ಸಮಾಜಮುಖಿ ಸಹೃದಯಿ.