Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ಬಿ. ಗಣಪತಿ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಕೃಷಿಗೈಯುತ್ತ ಸಾಹಿತ್ಯ ಪರಿಚಾರಿಕೆಯನ್ನು ನಡೆಸುತ್ತ ಬಂದಿರುವ ಉಭಯ ವಲಯ ಪ್ರತಿಭಾವಂತರು ಶ್ರೀ ಕೆ.ಬಿ. ಗಣಪತಿ ಅವರು.
“ಮೈಸೂರು ಮಿತ್ರ” ಬೆಳಗಿನ ಕನ್ನಡ ದಿನಪತ್ರಿಕೆ ಹಾಗೂ ‘ಸ್ಟಾರ್ ಆಫ್ ಮೈಸೂರು ಸಂಜೆ ಇಂಗ್ಲಿಷ್ ದಿನಪತ್ರಿಕೆಗಳ ಸ್ಥಾಪಕ, ಸಂಪಾದಕರಾಗಿ ಮೂರು ದಶಕಗಳಿಂದ ಯಶಸ್ವಿಯಾಗಿ ಪ್ರಕಟಿಸುತ್ತಿರುವ ಹಿರಿಯ ಪತ್ರಕರ್ತರು.
ಕರ್ನಾಟಕ ಹೈಕೋರ್ಟಿನ ವಕೀಲ ವೃತ್ತಿ, ಮುಂಬಯಿ ಪ್ರೆಸ್ ಜರ್ನಲ್ ಹಾಗೂ “ಇಂಡಿಯನ್ ಎಕ್ಸ್‌ಪ್ರೆಸ್” ಉಪಸಂಪಾದಕ ಜವಾಬ್ದಾರಿ ಮೊದಲಾದ ಮೌಲಿಕ ಕಾವ್ಯಾನುಭವದ ಹಿನ್ನೆಲೆ ಉಳ್ಳವರು.
ಆದರ್ಶವಾದಿ, ದಿ ಕ್ರಾಸ್ ಅಂಡ್ ದಿ ಕೂರ್ಗ್, ಕೊಡಗಿನ ಮೇಲೆ ಶಿಲುಬೆಯ ನೆರಳು ಮುಂತಾದ ಕಾದಂಬರಿಗಳನ್ನು “ಅಮೆರಿಕಾ ಎನ್ ಏರಿಯಾ ಆಫ್ ಲೈಟ್” ಎಂಬ ಪ್ರವಾಸಕಥನವನ್ನು ಬರೆದು ಪ್ರಕಟಿಸಿದ್ದಾರೆ.
ಅನೇಕ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಯೂರೋಪ್, ಜಪಾನ್ ಮೊದಲಾದ ದೇಶಗಳ ಪ್ರವಾಸ ಮಾಡಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ ಶ್ರೀ ಕೆ.ಬಿ. ಗಣಪತಿ ಅವರಿಗೆ