Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೆ.ಸು.ನಾ. ಮಲ್ಯ

ಬಾಲ್ಯದಿಂದಲೂ ರಾಷ್ಟ್ರೀಯವಾದಿ ಧೋರಣೆ ಹೊಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿ, ನಿಷ್ಠಾವಂತ ಪತ್ರಕರ್ತ ಮನ್ನಣೆಗೆ ಪಾತ್ರರಾದವರು ಬೆಳ್ಳಾಯಿ ಸುಬ್ರಾಯ ನಾರಾಯಣ ಮಲ್ಯ ಅವರು.
ಕಾರ್ಕಳದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ನೆಲೆ ನಿಂತು ‘ವಿಕ್ರಮ’ ವಾರಪತ್ರಿಕೆಯ ಸಂಪಾದಕರಾಗಿ ೪೧ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದವರು ಶ್ರೀಯುತರು.
೧೯೪೨ರ ರಾಷ್ಟ್ರೀಯ ಚಳವಳಿಯ ನೇತಾರರಿಗೆ, ಭೂಗತ ಕಾರ್ಯಕರ್ತರಿಗೆ ನೆರವು. ಬುರ್ಲಿ ಬಿಂದು ಮಾಧವರಾಯರಿಂದ ಸ್ಫೂರ್ತಿ ಪಡೆದು, ಕಾಲೇಜು ವ್ಯಾಸಂಗಕ್ಕೆ ಕೊನೆ ಹಾಡಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದವರು. ೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿರುವರು ಬೆಸುನಾ ಮಲ್ಯ
ಅಖಿಲ ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಸಮಿತಿ ಸದಸ್ಯತ್ವ, ಪತ್ರಿಕಾ ಅಕಾಡೆಮಿಯ ಸದಸ್ಯತ್ವ ಹಾಗೂ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
ಕನ್ನಡ, ಸಂಸ್ಕೃತ, ಆಂಗ್ಲ, ಹಿಂದಿ, ಮರಾಠಿ ಮತ್ತು ಕೊಂಕಣಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿರುವ ಶ್ರೀಯುತರು ಕನ್ನಡಕ್ಕೆ ಅನುವಾದಿಸಿರುವ ದೇಶದ ಹಿರಿಯ ನಾಯಕರ ಓಜಸ್ವಿ ಭಾಷಣಗಳು ಕಿರಿಯರೆಲ್ಲ ಓದಲೇಬೇಕಾದ ಬರಹಗಳು. ‘ವಿಕ್ರಮ ಎಂದರೆ ಬೆಸುನಾ ಮಲ್ಯ ಬೆಸುನಾ ಎಂದರೆ ‘ವಿಕ್ರಮ’ ಎನ್ನುವಷ್ಟರ ಮಟ್ಟಿಗೆ ಆ ಪತ್ರಿಕೆಗೆ ಸರ್ವಸ್ವವನ್ನೂ ಧಾರೆ ಎರೆದವರು ಶ್ರೀಯುತರು.