Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಡಾ. ಮಲ್ಲಣ್ಣ ನಾಗರಾಳ

ನೀರಿನ ಕೊರತೆಯನ್ನು ನೀಗಿಸಿ, ಲಭ್ಯ ನೀರನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಬೇಸಾಯ ಮಾಡುವ ಪದ್ಧತಿಗಳನ್ನು ರೂಢಿಗೆ ತರುವಲ್ಲಿ ಯಶ ಸಾಧಿಸಿದ ತಜ್ಞರಾದ ಹುನಗುಂದದ ಡಾ|| ಮಲ್ಲಣ್ಣ ನಾಗರಾಳ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ.
ಮಣ್ಣು ಹಾಗೂ ನೀರನ್ನು ಜತನದಿಂದ ಕಾಪಾಡುವುದರ ಮೂಲಕ ಉತ್ತಮವಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ಉಪಯೋಗಿಸುವ ಪರಿಪಾಠವನ್ನು ನಮ್ಮ ಪೂರ್ವಜರು ಇಟ್ಟುಕೊಂಡಿದ್ದರಿಂದ ಬೇಸಾಯವೊಂದೇ ಮೂಲಾಧಾರವಾಗಿತ್ತು. ಇದನ್ನು ನಿರ್ಲಕ್ಷಿಸಿದ್ದರಿಂದ ಕೃಷಿ ವಲಯ ಸಾಕಷ್ಟು ಪೆಟ್ಟು ತಿಂದಿದೆ ಎನ್ನುವ ಮಲ್ಲಣ್ಣ ನಾಗರಾಳ ಹಳೆಯ ವಿಧಾನಗಳಿಂದಲೇ ಕೃಷಿ ಮಾಡುವ ಮೂಲಕ ಹಳೆಯ ಯಶಸ್ಸನ್ನು ಇಂದಿನ ಕಾಲಕ್ಕೆ ನಿಜ ಮಾಡಿ ತೋರಿದ್ದಾರೆ.