Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶೋಭ.ಆರ್. ಹುಂಖಲಗೋಳ

ಸ್ನಾತಕೋತ್ತರ ಸಂಗೀತ ಪದವಿಯಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ಶೋಭಾ.ಆರ್.ಹುಯಿಲಗೋಳ ಅವರು ತಮ್ಮ ತಂದೆಯವರಿಂದ ಎಳೆಯ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಣೆ ಹೊಂದಿದವರು, ವಿದ್ವತ್ತಿನಲ್ಲಿ ಎರಡನೆಯ ಬ್ಯಾಂಕ್ ಪಡೆದು ಹಿಂದೂಸ್ಥಾನಿ ಸಂಗೀತವನ್ನು ಪಂಡಿತ್ ವೆಂಕಟೇಶಕುಮಾರ್ ಅವರಲ್ಲಿ ಅಭ್ಯಾಸ ಮಾಡಿದ ಇವರು ತಮ್ಮದೇ ಆದ ‘ರಾಜೀವ ಪುರಂಧರೆ ಸಂಗೀತ ಸಂಸ್ಥೆ’ಯ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಹಲವು ಕಡೆಗಳಲ್ಲಿ ಸಂಗೀತ ತರಬೇತಿ ನೀಡುತ್ತ ಬಂದಿರುವ ಶೋಭಾ ಅವರು ಗೀತ ರಾಮಾಯಣ, ವಿಶ್ವಾಮಿತ್ರ ಮೇನಕೆ, ಮೊದಲಾದ ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಂಗ ಗೀತೆಗಳ ಬಗ್ಗೆಯೂ ವಿಶೇಷ ತರಬೇತಿಯನ್ನು ರಂಗದಿಗ್ಗಜರಾದ ಏಣಗಿ ಬಾಳಪ್ಪನವರಿಂದ ಪಡೆದುಕೊಂಡಿರುವ ಶೋಭಾ ಅವರು ಆಕಾಶವಾಣಿಯ ಏ-ಗ್ರೇಡ್ ಕಲಾವಿದೆ.
ಅನೇಕ ಸಂಗೀತ ಕಾರ್ಯಕ್ರಮಗಳಿಗೆ ನಿರ್ದೇಶನ ನೀಡಿರುವ ಇವರು ರಂಗಗೀತೆ ಹಾಗೂ ಶಾಸ್ತ್ರೀಯ ಸಂಗೀತ ರೂಪಕಗಳ ಧ್ವನಿಸುರುಳಿಗಳನ್ನು ರೂಪಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಶ್ರೀಮತಿ ಶೋಭಾ.ಆರ್.ಹುಯಿಲಗೋಳ ಅವರಿಗೆ ಲಭಿಸಿವೆ.