Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಎಸ್. ನಾಗಣ್ಣ

ತುಮಕೂರು ಜಿಲ್ಲೆಯವರಾದ ನಾಗಣ್ಣ ಅವರು ಶಿಕ್ಷಕರಾಗಿದ್ದು ನಂತರ ಪತ್ರಿಕೋದ್ಯಮದತ್ತ ಬಂದವರು. ತುಮಕೂರಿನಲ್ಲಿ ಪ್ರಜಾಪ್ರಗತಿ ವಾರ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗಣ್ಣ ನಂತರ ಪ್ರಜಾಪ್ರಗತಿ ಪತ್ರಿಕೆಯನ್ನು ದೈನಿಕವಾಗಿ ಪರಿವರ್ತಿಸಿದರು.
ಮೊಳೆಯಚ್ಚಿನಲ್ಲಿ ಮುದ್ರಣವಾಗುತ್ತಿದ್ದ ಪ್ರಜಾಪ್ರಗತಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆಯನ್ನು ಅಳವಡಿಸಿಕೊಂಡು ಈಗ ಮುನ್ನಡೆಯುತ್ತಿದೆ. ಇದರ ಸಂಪಾದಕರಾಗಿ ವೃತ್ತಿಪರತೆ ಪಡೆದುಕೊಂಡ ನಾಗಣ್ಣ ಅವರು ಪ್ರಜಾಪ್ರಗತಿ ದಿನಪತ್ರಿಕೆಯನ್ನು ಚಿತ್ರದುರ್ಗ ಹಾಗೂ ದಾವಣಗೆರೆ ಆವೃತ್ತಿಗಳನ್ನಾಗಿ ಪ್ರಕಟಿಸಲು ಕಾರಣರಾದರು.
ಪ್ರಜಾಪ್ರಗತಿ ದೈನಿಕದ ರುವಾರಿಗಳಾದ ನಾಗಣ್ಣ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.