Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕೆ.ಜಿ. ನಾಗರಾಜಪ್ಪ

ತುಮಕೂರು ಜಿಲ್ಲೆಯ ಕಲ್ಲೂರಿನವರಾದ ಕೆ.ಜಿ.ನಾಗರಾಜಪ್ಪ ಕಾಲೇಜು ಅಧ್ಯಾಪಕರಾಗಿದ್ದು, ನಂತರ ಪ್ರಾಧ್ಯಾಪಕರಾದವರು. ಸಂಶೋಧಕರಾಗಿ ಹೆಸರು ಮಾಡಿರುವ ಇವರು ಕುವೆಂಪು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೇವಾಂಗ ಜನಾಂಗದ ಬಗ್ಗೆ ವಿಶೇಷ ಸಂಶೋಧನೆ ನಡೆಸಿರುವ ಪ್ರೊ. ಕೆ.ಜಿ.ನಾಗರಾಜಪ್ಪ ಅವರು ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಪುರಸ್ಕೃತರು. ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿರುವ ಹಿರಿಮೆ ನಾಗರಾಜಪ್ಪನವರದು.