Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಹನುಮಂತ ಹೂಗಾರ

ನಾಲ್ಕು ದಶಕಗಳ ಕಾಲ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಹಾಯಕ ಸಂಪಾದಕರಾಗಿ ನಿವೃತ್ತರಾದ ಹಿರಿಯ ಪತ್ರಿಕೋದ್ಯಮಿಗಳು. ಹನುಮಂತ ಭೀಮಪ್ಪ
ಹೂಗಾರ ಅವರು.
ಹುಬ್ಬಳ್ಳಿಯವರಾದ ಹನುಮಂತ ಹೂಗಾರ್ ಅವರು ವಿಶ್ವವಾಣಿ, ವಿಶಾಲ ಕರ್ನಾಟಕ, ನೇತಾಜಿ, ಲೋಕವಾಣಿ ಪತ್ರಿಕೆಗಳಲ್ಲಿ ಸಹಾಯಕ ಸಂಪಾದಕ, ಮುಖ್ಯವರದಿಗಾರ, ವಿಶೇಷ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು.
ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ಹನುಮಂತ ಹೂಗಾರ್ ಪತ್ರಿಕೋದ್ಯಮದ ಎಲ್ಲಾ ಒಳಹೊರಗುಗಳನ್ನು ಬಲ್ಲವರು.