Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ವಿನಯಕುಮಾರ್

ಕರ್ನಾಟಕದ ಕ್ರಿಕೆಟ್ ತಂಡದ ನಾಯಕರಾಗಿ, ಎರಡು ಬಾರಿ ರಣಜಿ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಭಾರತದ ಎಲ್ಲ ಪ್ರಮುಖ ಕ್ರಿಕೆಟ್ ವಲಯ ಹಾಗೂ ಅಂತರರಾಜ್ಯ ಕ್ರಿಕೆಟ್ ಟೂರ್ನಿಗಳನ್ನು ಗೆದ್ದುಕೊಟ್ಟ ವಿನಯಕುಮಾರ್ ಮಧ್ಯಮವೇಗದ ಬೌಲರ್. ಭಾರತ ತಂಡದಲ್ಲಿಯೂ ಅವಕಾಶ ಪಡೆದಿದ್ದು, ಪ್ರಸ್ತುತ ದೇಶೀಯ ಕ್ರಿಕೆಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿನಯಕುಮಾರ್ ಭವಿಷ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಲಕ್ಷಣಗಳನ್ನು ತೋರುತ್ತಿದ್ದಾರೆ.
“ದಾವಣಗೆರೆ ಎಕ್ಸ್ ಪ್ರೆಸ್” ಎಂದೇ ಖ್ಯಾತರಾದ ವಿನಯಕುಮಾರ್ ಭಾರತ ತಂಡದ ಭರವಸೆಯ ಮಧ್ಯಮವೇಗಿ ಬೌಲರ್.