Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ. ಸಾಯಿಕುಮಾರ್

ತಮ್ಮ ೧೧ನೆಯ ವಯಸ್ಸಿನಲ್ಲಿಯೆ ರಂಗಭೂಮಿಯ ನಂಟು ಬೆಳೆಸಿಕೊಂಡು, ಇಂದು ೫೦ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ ಜನಪ್ರಿಯ ಸಿನಿಮಾ ನಟ ‘ಡೈಲಾಗ್‌ಕಿಂಗ್’ ಶ್ರೀ ಸಾಯಿಕುಮಾರ್.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾದ ಶ್ರೀ ಸಾಯಿಕುಮಾರ್ ಅವರು ತಂದೆ ತಾಯಿ ಕೂಡ ರಂಗಭೂಮಿಯಿಂದ ಬಂದವರು. ತಂದೆ ಪಿ.ಜೆ. ಶರ್ಮ ತಾಯಿ ಕೃಷ್ಣಜ್ಯೋತಿ, ೧೯೬೧ರಲ್ಲಿ ಜನಸಿದ ಶ್ರೀ ಸಾಯಿಕುಮಾರ್ ಅವರು ಎಂ.ಎ. ಪದವೀಧರರು.
ತಂದೆ ತಾಯಿ ಜೊತೆ ರಂಗಭೂಮಿಯ ಒಡನಾಟದಲ್ಲಿಯೇ ಬೆಳೆದವರು. ೧೯೯೩ ನೇ ಇಸವಿಯಲ್ಲಿ ಬೆಳ್ಳಿತೆರೆಗೆ ಪ್ರವೇಶ
ಮಾಡಿದರು.
ಪೊಲೀಸ್ ಸ್ಟೋರಿ, ಲಾ ಅಂಡ್ ಆರ್ಡರ್, ಇಂಡಿಪೆಂಡನ್ಸ್ ಡೇ, ಮಹಾಸಾದ್ವಿ ಮಲ್ಲಮ್ಮ, ನಾಗದೇವತೆ, ರೇಣುಕಾದವಿ ಮಹಾತ್ಯೆ, ಅಗ್ನಿ ಐ.ಪಿ.ಎಸ್., ದುರ್ಗದ ಹುಲಿ ಮೊದಲಾದ ೫೦ ಚಲನಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಶ್ರೀ ಸಾಯಿಕುಮಾರ್ ಅವರು ಅಮೋಘವಾಗಿ ಅಭಿನಯಿಸಿದ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ” ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದು ಅಪಾರ ಜನಮನ್ನಣೆ ಗಳಿಸಿದೆ.
ಕಂಚಿನ ಕಂಠದಲ್ಲಿ, ಶ್ರೇಷ್ಠ ಶೈಲಿಯಲ್ಲಿ, ಸ್ಪಷ್ಟ ಉಚ್ಚಾರದೊಡನೆ ಪಾತ್ರದ ಸಂಭಾಷಣೆಯನ್ನು ನಿರ್ವಹಿಸುವ ಇವರ ರೀತಿ ಪ್ರಶಂಸನೀಯ. ಸಿನೇಮಾ ಪ್ರೇಕ್ಷಕರು ಪ್ರೀತಿಯಿಂದ ಇವರಿಗಿರುವ ಬಿರುದು ‘ಡೈಲಾಗ್ ಕಿಂಗ್’.
ಸಿನಿಮಾ ಪಾತ್ರಕ್ಕೆ ಜೀವತುಂಬುವ ಅಪ್ರತಿಮ ಕಲಾವಿದ ಶ್ರೀ ಪಿ. ಸಾಯಿಕುಮಾರ್.