Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಎಂ.ಆರ್.ಶ್ರೀನಿವಾಸನ್

ರಾಷ್ಟ್ರದ ಅಣುಶಕ್ತಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಎಂ.ಆರ್.ಶ್ರೀನಿವಾಸನ್ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಕೇಂದ್ರ ಸರ್ಕಾರದ ಅಣು ಇಂಧನ ಇಲಾಖೆಗೆ ಕಾಲಿಟ್ಟರು.

ದೇಶದ ಮೊಟ್ಟಮೊದಲ ಅಣುಇಂಧನ ಕೇಂದ್ರದ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶ್ರೀನಿವಾಸನ್ ಅವರು ನಂತರ ಮದರಾಸಿನ ಅಣುವಿದ್ಯುತ್ ಕೇಂದ್ರದ ನೇತೃತ್ವ ವಹಿಸಿದವರು. ಭಾರತದ ಅಣು ಇಂಧನ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಅಣು ಇಂಧನ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸನ್ ಭಾರತೀಯ ನ್ಯೂಕ್ಲಿಯ ಪವರ್ ಕಾರ್ಪೋರೇಷನ್‌ ಸ್ಥಾಪಕ ಅಧ್ಯಕ್ಷರು.

ದೇಶದ ಎಲ್ಲ ನ್ಯೂಕ್ಲಿಯರ್ ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀನಿವಾಸನ್ ಗ್ಯಾಸ್ ಟರ್ಬೈನ್ ತಂತ್ರಜ್ಞಾನದಲ್ಲಿಯೂ ನೈಪುಣ್ಯತೆ ಪಡೆದವರು. ದೇಶದ ಪ್ರತಿಷ್ಠಿತ ಪದ್ಮವಿಭೂಷಣ, ಭಾರತೀಯ ಇಚಿಜಿನಿಯರಿಂಗ್ ಇನ್ಸಿಟ್ಯೂಟಿನ ಶ್ರೇಷ್ಠ ವಿನ್ಯಾಸಕಾರ, ಹೋಮಿ ಬಾಬಾ ಪ್ರಶಸ್ತಿ ಸೇರಿದಂತೆ ಹಲವಾರು ದೇಶವಿದೇಶಗಳ ಉನ್ನತ ಗೌರವ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ