Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಪುಟ್ಟಸಿದ್ಧಯ್ಯ

ತಳಸಮುದಾಯದ ಶೈಕ್ಷಣಿಕ ಏಳೆಗೆ ಅಹರ್ನಿಶಿ ಶ್ರಮಿಸಿದವರು ಡಾ. ಪುಟ್ಟಸಿದ್ಧಯ್ಯ, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ವೈದ್ಯ, ಸಮಾಜಸೇವಕರಾದ ಬಹುರೂಪಿ,
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದಾಸನಪುರದಲ್ಲಿ ಹುಟ್ಟಿದ ಪುಟ್ಟಸಿದ್ಧಯ್ಯ ಎಂ.ಬಿ.ಬಿ.ಎಸ್. ಪದವೀಧರರು. ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲಾ ವೈದ್ಯಾಧಿಕಾರಿಯಾಗಿ ದಶಕಗಳ ಕಾಲ ಸೇವೆ. ಉಪಮುಖ್ಯ ವೈದ್ಯಾಧಿಕಾರಿಯಾಗಿ ನಿವೃತ್ತಿ. 1991ರಲ್ಲಿ ಬಾಬು ಜಗಜೀವನರಾಂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಚನೆ. ದಮನಿತ ಸಮುದಾಯದ ಶೈಕ್ಷಣಿಕ ಏಳೆಗಾಗಿಯೇ ಪ್ರೌಢಶಾಲೆ, ಬಾಲಕರ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ಪದವಿಪೂರ್ವ ಕಾಲೇಜು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ. ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ. ದಕ್ಷಿಣ ಭಾರತದ ಹಲವೆಡೆ ತಳಸಮುದಾಯದವರಲ್ಲಿ ಸಾಮಾಜಿಕ ಅರಿವು ಮೂಡಿಸುವಿಕೆ, ದಲಿತ ಮಕ್ಕಳಿಗಾಗಿ ಸಾಂಸ್ಕೃತಿಕ-ಕ್ರೀಡಾ ಕಾರ್ಯಕ್ರಮಗಳ ಆಯೋಜನೆ. ಉತ್ತಮ ಸೇವಾ ಪ್ರಶಸ್ತಿ, ಜಾಂಬವಶ್ರೀ ಪ್ರಶಸ್ತಿ, ದಲಿತಶ್ರೀ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾದ ಸಮಾಜಬಂಧು.