Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಜಿ. ಎನ್. ಚಕ್ರವರ್ತಿ

ಋದ್ವೇದ ಕುಲಿತು ಉನ್ನತ ಮಟ್ಟದ ಅಧ್ಯಯನಕ್ಕೆ ಹೆಸರಾದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.
೧೯೧೨ರಲ್ಲಿ ಜನನ. ಸಂಸ್ಕೃತದಲ್ಲಿ ಎಂ.ಎ. ಪದವಿ, ಮೈಸೂಲನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ನಂತರ ೧೯೪೬ ಲಂದ ೭೨ರ ವರೆಗೆ ಮೈಸೂಲಿನ ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಕೆ. ೧೯೭೨ ಲಂದ ೭೭ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನಗಳ ವಿಭಾಗದಲ್ಲಿ ಸಂಸ್ಕೃತದ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಕೆ.
ವಿಸ್ತ್ರತ ಟಿಪ್ಪಣಿ ಮತ್ತು ವಿವರಣೆಗಳೊಂದಿಗೆ ಕನ್ನಡದಲ್ಲಿ ಋಗ್ವದ ೩೦ ಸಂಪುಟಗಳ ಸಂಪಾದನೆಯ ಕಾರ್ಯನಿರ್ವಹಣೆ. ಋಕ್ಸಂಹಿತಾ ಸಾರ, ಧರ್ಮಚಕ್ರ, ಋಗ್ ವೇದದಲ್ಲಿ ವಿಶ್ವಸಾಮರಸ್ಯ, ಇತಿಹಾಸ ಪ್ರದೀಪ, ಸಂಸ್ಕೃತ-ಕನ್ನಡ ನಿಘಂಟು – ಪ್ರೊ. ಜಿ. ಎನ್. ಚಕ್ರವರ್ತಿ ಅವರು ರಚಿಸಿದ ಪ್ರಮುಖ ಕೃತಿಗಳು. ಇಂಗ್ಲಿಷಿನಲ್ಲಿ ‘ಐ ಕಾನ್ಸೆಪ್ಟ್ ಆಫ್ ಕಾಸ್ಮಿಕ್ ಹಾರ್ಮೊನಿ ಇನ್ ಲಗ್ವೇದ, ವ್ಯಾಸಾಸ್ ಫಿಲಾಸಫಿ ಆಫ್ ಹಿಸ್ಟಲ, ದಿ ಪ್ರಾಬ್ಲೆಮ್ ಆಫ್ ಈವಿಲ್ ಇನ್ ದಿ ಮಹಾಭಾರತ’ ಕೃತಿಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರು. ಅಲ್ಲದೆ, ವಿವಿಧ ಪತ್ರಿಕೆಗಳಲ್ಲಿ ಶ್ರೀಯುತರ ಲೇಖನಗಳು ಪ್ರಕಟವಾಗಿವೆ.
೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವದ ಪ್ರಶಸ್ತಿ, ಭಾರತೀಯ ವಿದ್ಯಾಭವನದಿಂದ ವೇದರತ್ನ ಪುರಸ್ಕಾರ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ತೊಂಬತ್ತೈದರ ವಯೋವೃದ್ಧರೂ, ಜ್ಞಾನವೃದ್ಧರೂ, ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯಲ್ಲೂ ಪಾಂಡಿತ್ಯ- ಪಡೆಬರುವ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.