Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ.ಸಿ.ಎನ್. ರಾಮಚಂದ್ರನ್

ಸತತ ಪಲಶ್ರಮ, ಆಳವಾದ ಅಧ್ಯಯನ, ವೈಚಾಲಕ ಮನೋಭಾವ, ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದವರು ಡಾ.ಸಿ.ಎನ್. ರಾಮಚಂದ್ರನ್ ಅವರು.
೧೯೩೬ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಲುಂದ ಗ್ರಾಮದಲ್ಲಿ ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ.ಪದವಿ, ಒಹಾಯೋದ ಮಿಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ, ಅಲ್ಲದೆ ಎಲ್ಎಲ್.ಬಿ ಪದವೀಧರರು. ಸೊಲ್ಲಾಪುರ,ಕೊಲ್ಲಾಪುರ, ಸೊಮಾಲಿಯಾ,ನಿಪ್ಪಾಣಿ, ಅಮೆಲಕ, ಸೌದಿ ಅರೇಬಿಯಾ ಮುಂತಾದ ಸ್ಥಳಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಕೆ. ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್ಗಳ ಸದಸ್ಯರಾಗಿ ವ್ಯಾಪಕ ಅನುಭವ ಗಳಿಕೆ.
ಶೋಧ(ಕಾದಂಬಲ), ಶಿಲ್ಪವಿನ್ಯಾಸ, ಸ್ವರೂಪ, ಸಾಹಿತ್ಯ ವಿಮರ್ಶೆ, ಆಶಯ-ಅಕೃತಿ, ವಸಾಹತೋತ್ತರ ಚಿಂತನೆ(ವಿಮರ್ಶಾ ಕೃತಿಗಳು) ಅಮಾಸ, ಮಲೆ ಮಾದೇಶ್ವರ, ಬೇಟೆಯ ನೆನಪುಗಳು, ಕುವೆಂಪು ೨೧ ಕವನಗಳು(ಇಂಗ್ಲಿಷಿಗೆ ಅನುವಾದಿಸಿದ ಕೃತಿಗಳು) ಸೆಲ್ಫ್ ಕಾನ್ನಿಯಸ್ ಸ್ಟಕ್ಟರ್, ಅಮೆಲಕನ್ ಪೊದ್ರಿ(ಇಂಗ್ಲಿಷ್ ಕೃತಿಗಳು)-ಮುಂತಾದವು ಡಾ. ಸಿ.ಎನ್. ರಾಮಚಂದ್ರನ್ ಅವರ ಪ್ರಮುಖ ಕೃತಿಗಳು.
ಡಾ. ಸಿ.ಎನ್. ರಾಮಚಂದ್ರನ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇನಾಂದಾರ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಥಾ ಅವಾರ್ಡ್ ಮುಂತಾದ ಪ್ರಶಸ್ತಿಗಳಿಗೆ ಭಾಜನರು.
ಬಹು ಶಿಸ್ತೀಯ ಅಧ್ಯಯನಕ್ಕೆ ಹೆಸರಾದ ಹಾಗೂ ವಿಮರ್ಶೆ, ಅನುವಾದಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದವರು ಡಾ.ಸಿ.ಎನ್. ರಾಮಚಂದ್ರನ್ ಅವರು.