Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಸುಮಿತ್ರಾ ಗಾಂಧಿ ಕುಲಕರ್ಣಿ

ಮಹಾತ್ಮಾಗಾಂಧಿಯವರ ಮೊಮ್ಮಗಳು, ಅಡಳಿತ ಸಾಹಿತ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ದುಡಿದವರು ಶ್ರೀಮತಿ ಸುಮಿತ್ರಾ ಗಾ೦ಛಿ ಕುಲಕರ್ಣಿ ಅವರು. ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡುವ ಮೂಲಕ ಗಮನ ಸೆಳೆದಿರುವ ಸುಮಿತ್ರಾ ಗಾಂಧಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಮೊದಲ ಬ್ಯಾಂಕ್ ಪಡೆದು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಎಂ.ಎ. ಪದವಿ ಅಂತರ್ ರಾಷ್ಟ್ರೀಯ ಸಂಬಂಧಗಳಲ್ಲಿ ಅಮೆಲಕದ ಕ್ಲಾರ್ಕ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಹಾಗೂ ನಾಗಪುರ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಗಳಿಸಿದವರು. ಹಏನೇಳು ವರ್ಷಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಕೇಂದ್ರ ಸರ್ಕಾರದ ಯೋಜನಾ ಆಯೋಗ ಹಾಗೂ ಹಣಕಾಸು ಮಂತ್ರಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸುಮಿತ್ರಾ ಗಾಂಧಿ ಕುಲಕರ್ಣಿ ಅವರು ಜನಪ್ರಿಯ ಸಾಹಿತಿ, ತಾತ ಮಹಾತ್ಮಾಗಾಂಧಿಯವರ ಜೀವನ ಚಲತ್ರೆ ರಚಿಸಿರುವ ಇವರು ಅನೇಕ ರಾಜಕೀಯ ವಿಶ್ಲೇಷಣಾ ಲೇಖನಗಳನ್ನು ಬರೆದವರು. ಇವರು ಬರೆದ ‘ಗಾಂಧಿ’ ಕೃತಿ ಅನೇಕ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೀವನ ಚಲತ್ರೆಗಳನ್ನು ರಚಿಸಿರುವ ಇವರು ‘ಅನ್ಮೋಲ್ ವಿರಾಸತ್’ ಎಂಬ ಹಿಂಬ ಕೃತಿಯನ್ನು ಮೂರು ಸಂಪುಟಗಳಲ್ಲಿ ರಚಿಸಿದ್ದಾರೆ.
ರಾಜ್ಯಸಭೆಗೆ ೧೯೭೨ರಲ್ಲಿ ಆಯ್ಕೆಯಾದ ಸುಮಿತ್ರಾಗಾಂಧಿ ಕುಲಕರ್ಣಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಸದಸ್ಯರಾಗಿದ್ದರು. ಫಿಜಿ ದೇಶಕ್ಕೆ ಪ್ರವಾಸಕ್ಕಾಗಿ ಹೋಗಿದ್ದ ಭಾರತೀಯ ಸೌಹಾರ್ದ ನಿಯೋಗದ ಅಧ್ಯಕ್ಷರಾಗಿದ್ದ
ಇವರು ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆ ಕುಲತ ಕೇಂದ್ರ ಸಮಿತಿಯ ಪಲಶೀಲನಾ ಘಟಕದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.