Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಚಿ. ಶ್ರೀನಿವಾಸರಾಜು

ಪ್ರಗತಿಶೀಲ ಚಿಂತನೆ ಮತ್ತು ವಿಚಾರಧಾರೆಗಳಿಂದ ಕನ್ನಡ ಸಾರಸ್ವತ ಪ್ರಪಂಚದಲ್ಲ ಮಹತ್ವದ ಸ್ಥಾನವನ್ನು ಪಡೆದಿರುವ ವಿಮರ್ಶಕರು ಹಾಗೂ ಚಿಂತಕರು ಪ್ರೊ. ಚಿ. ಶ್ರೀನಿವಾಸರಾಜು ಅವರು. ೧೯೪೧ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನನ. ಎಂ.ಎ.(ಕನ್ನಡ) ಪದವಿ, ಇಂಡಾಲಜಿಯಲ್ಲಿ ಡಿಪ್ಲೋಮಾ ಗಳಿಕೆ. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಕೆ. ಪ್ರೊ. ಚಿ. ಶ್ರೀನಿವಾಸರಾಜು ಅವರು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಿಗೆ ಪಲಪುಷ್ಟಿಯನ್ನು ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಟ್ಟಿಸಿ ಪ್ರೋತ್ಸಾಹ ನೀಡಿದ ಹಿಲಮೆಗೆ ಪಾತ್ರರು.
ಐದು ಮೂಕ ನಾಟಕಗಳು, ಮೂರು ಏಕಾಂಕಗಳು, ಹಆಯ ಮೇಲಿನ ಸದ್ದು, ನಿಮ್ಮಮಣ(ನಾಟಕಗಳು); ಛಸನಾಲ ಬಂಧು(ಕವನ ಸಂಕಲನ); ಬಾವಿ ಕಟ್ಟೆಯ ಬಳೀ (ಅನುವಾದ), ಆಗಾಗ(ಲೇಖನಗಳು)- ಮುಂತಾದವು ಪ್ರೊ. ಚಿ. ಶ್ರೀನಿವಾಸರಾಜು ಅವರ ಪ್ರಮುಖ ಕೃತಿಗಳು.
ಪ್ರೊ. ಚಿ. ಶ್ರೀನಿವಾಸರಾಜು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪಲಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಂಸ ಪ್ರಶಸ್ತಿ, ಮಾನು ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ
ಸಂಕೋಚ ಸ್ವಭಾವದ, ಅಚ್ಚುಕಟ್ಟಾದ ಕೆಲಸಕ್ಕೆ ಹೆಸರಾದ, ಚಿಂತನಪರ ವಿಮರ್ಶಕರು ಹಾಗೂ ಸದ್ದಿಲ್ಲದ ಕನ್ನಡ ಸಾಹಿತ್ಯ ಪಲಚಾರಕರು ಪ್ರೊ. ಚಿ. ಶ್ರೀನಿವಾಸರಾಜು ಅವರು.