Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಮ.ನ. ಜವರಯ್ಯ

ಕಾವ್ಯ, ನಾಟಕ, ಸಣ್ಣಕತೆ, ಕಾದಂಬಲ, ಅನುವಾದ, ವಿಮರ್ಶೆ, ಸಂಶೋಧನೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಹುಮುಖ ಪ್ರತಿಭಾವಂತ ಸಾಹಿತಿ ಡಾ. ಮ.ನ. ಜವರಯ್ಯ ಅವರು.
ಮೈಸೂರು ಸೀಮೆಯ ಲಾವಣಿ ಪಲಣತರಾದ ಶ್ರೀ ಮಲಚಾಮಯ್ಯನವರ ಮಗನಾದ ಡಾ. ಮ.ನ. ಜವರಯ್ಯ ಅವರು ಮನಜ ಎಂದೇ ಪ್ರಸಿದ್ಧರು. ಎಂಎ.ಪಿಹೆಚ್.ಡಿಡಿ.ಅಟ್ಎಲ್ಎಲ್.ಐ ಪದವೀಧರರು. ಇಪ್ಪತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು, ನೂಲಪ್ಪತ್ತಕ್ಕೂ ಹೆಚ್ಚು ಲೇಖನಗಳ ಕರ್ತೃ.
ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರನ್ನು ಕುಲತು ಬರೆದ ಗ್ರಂಥಗಳು ಅತ್ಯಂತ ಮಹತ್ವಪೂರ್ಣವಾದವು. ಕೇಳು ಜಗಮಾದಿಗ ಹೊಲೆಯ, ಗುಲಾಮಿ (ಕವನ ಸಂಕಲನಗಳು), ಜಲ(ನಾಟಕ), ಬುರುಡೆಗೆ ಸ್ವರ್ಣ(ನಾಟಕ), ಮಾಲ (ಕಾದಂಬಲ),ದಂತ ವರ್ಗದ ಶರಣರು ಮತ್ತು ಶರಣೆಯರು-ಒಂದು ಅಧ್ಯಯನ, ಅಂಬೇಡ್ಕರ್ ಜೀವನಚಲತ್ರೆ, ಗಾಂಧಿ-ಅಂಬೇಡ್ಕರ್ ಧೈಯ-ಧೋರಣಿ (ಸಂಶೋಧನಾ ಗ್ರಂಥಗಳು), ಜಾತಿ ವಿನಾಶ, ರಾನಡೆ ಗಾಂಧಿ ಮತ್ತು ಜಿನ್ನಾ, ಬುದ್ಧ ಮತ್ತು ಕಾರ್ಲ್ಮಾರ್ಕ್ಸ್(ಅನುವಾದ ಕೃತಿಗಳು) ಮುಂತಾದವು ಡಾ. ಮ.ನ. ಜವರಯ್ಯ ಅವರ ಪ್ರಮುಖ ಕೃತಿಗಳು.
ಜಲ ನಾಟಕಕ್ಕೆ ಮತ್ತು ಮಾಣ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಪರಂಪರೆ ಹಾಗೂ ದಅತ ಬಂಡಾಯ ಸಾಹಿತ್ಯ ಸಮಗ್ರ ಅಧ್ಯಯನ ಗ್ರಂಥಕ್ಕೆ ಕಾವ್ಯಾನಂದ ಪ್ರಶಸ್ತಿ, ಅಂಬೇಡ್ಕರ್ ವಿಚಾರ ಸಾಹಿತ್ಯ ಸಮಗ್ರ ಅಧ್ಯಯನಕ್ಕೆ ವಿಶ್ವ ಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದವು ಡಾ.ಮನಃ ಅವಲಗೆ ಸಂದ ಪ್ರಶಸ್ತಿ ಪುರಸ್ಕಾರಗಳು. ಅಧ್ಯಯನಶೀಲತೆ, ಅವ್ಯಾಹತ ಸಾಹಿತ್ಯ ರಚನೆಯಿಂದ ಕನ್ನಡ ಸಾಹಿತ್ಯಕ್ಕೆ ಮೌಂಕ ಕೊಡುಗೆ ನೀಡಿದವರು ಡಾ. ಮ.ನ. ಜವರಯ್ಯ ಅವರು.