Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಗಂಗಾಧರನ್

ವಕೀಲ ವೃತ್ತಿ-ರಾಜಕಾರಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು ಶ್ರೀ ಎಚ್. ಗಂಗಾಧರನ್ ಅವರು.
ತುಮಕೂರು ಜಿಲ್ಲೆ ಹಿಂಡಿಸಗೆರೆಯಲ್ಲಿ ಹುಟ್ಟಿ ಈಗ ಮೈಸೂರಿನಲ್ಲಿ ನೆಲೆಸಿರುವ ಶ್ರೀ ಎಚ್. ಗಂಗಾಧರನ್ ಮೈಸೂರು ಕೃಷ್ಣರಾಜಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದವರು.
ಜೆ.ಎಸ್.ಎಸ್. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಶ್ರೀ ಎಚ್. ಗಂಗಾಧರನ್ ಅವರು ಕಾರ್ಮಿಕ ಸಂಘಟನೆ, ಸಹಕಾರ ಸಂಘ, ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರು.
ಸಾಹಿತ್ಯದಲ್ಲಿ ಅಭಿರುಚಿಯುಳ್ಳ ಶ್ರೀ ಎಚ್.ಗಂಗಾಧರನ್ ಅವರು ಅನೇಕ ಧಾರ್ಮಿಕ, ದಾರ್ಶನಿಕ ಕೃತಿಗಳನ್ನು ಹಾಗೂ ಕಾದಂಬರಿಗಳನ್ನು ರಚಿಸಿದ್ದಾರೆ.
ನಾಡಿನ ಅನೇಕ ಪ್ರಸಿದ್ಧ ದೇವಾಲಯಗಳ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಚ್. ಗಂಗಾಧರನ್ ಅವರು ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.