Categories
ಯುವಜನ ಸೇವಾ ಶಿಕ್ಷಣ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಕೆ. ಆರ್. ಸುಶೀಲೆಗೌಡ

ಶಿಕ್ಷಕರಾಗಿದ್ದು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಹಾಸನದ ಪೊ. ಕೆ.ಆರ್. ಸುಶೀಲೇಗೌಡ ಅವರು.
ಕಾಲೇಜು ಶಿಕ್ಷಕರಾಗಿ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ಶ್ರೀ. ಸುಶೀಲೇಗೌಡ ಅವರು ಹಾಸನದ ನೆಹರೂ ಯುವಕ ಕೇಂದ್ರದ ಸಮನ್ವಯಾಧಿಕಾರಿಯಾಗಿ ಯುವ ಚಟುವಟಿಕೆಗಳಿಗೆ ಹೊಸತನ ತಂದವರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳನ್ನು ಬಲ್ಲ ಶ್ರೀ. ಸುಶೀಲೇಗೌಡರು ಸೇವಾದಳ, ಹಿಂದಿ ಪ್ರಚಾರಸಭಾ, ಸಂಸ್ಕೃತ ಸಂಘ ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಪತ್ರಿಕೆಗಳನ್ನು ತರಲು ಪ್ರೋತ್ಸಾಹ ನೀಡಿರುವ ಶ್ರೀ. ಸುಶೀಲೇಗೌಡರು ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಉತ್ತಮ ಕಾರ್ಯಕರ್ತರೆಂಬ ಪ್ರಶಸ್ತಿಗೆ ಪಾತ್ರರಾದವರು.