Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಾದಲ್ ಚಂದ್ ಜೊರ್ಡಿಯಾ ಟ್ರಸ್ಟ್

ಹೃದ್ರೋಗದಿಂದ ಬವಣೆಪಡುವ ಅಸಹಾಯಕರಿಗೆ ಆಸರೆ ದೀಪವಾಗಿ ನಿಂತಿದೆ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್.
ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಡವರಿಗೆ ಸಂಪೂರ್ಣ ವೆಚ್ಚವನ್ನು ಭರಿಸುವ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್ (ಚೆನ್ನೈ) ಈವರೆಗೆ ನೂರಾರು ರೋಗಿಗಳ ನೆರವಿಗೆ ಬಂದಿದೆ.
ಚೆನ್ನೈನಲ್ಲಿರುವ ಈ ಟ್ರಸ್ಟ್ ತನ್ನ ದತ್ತಿ ನಿಧಿಯಿಂದ ಪ್ರತಿ ತಿಂಗಳು ೧೦-೧೫ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದ್ದು ಕರ್ನಾಟಕದ ಕಡೂರು ಸೇರಿದಂತೆ ೧೧ ಕಡೆಗಳಲ್ಲಿ ಶಾಲಾ ಕಟ್ಟಡ ನಿರಾಣಕ್ಕೂ ಸಹಾಯ ಹಸ್ತ ನೀಡಿದೆ.
ಚೊರ್ಡಿಯಾ ಟ್ರಸ್ಟ್‌ನ ಪರವಾಗಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಶ್ರೀ ಶಾಂತಿಲಾಲ್ ಕಂಕರಿಯಾ ಜೈನ್ ರಾಜಾಸ್ತಾನ್ ಯೂತ್ ಅಸೋಸಿಯೇಷನ್ ಮೂಲಕ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ವಿತರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಚೊರ್ಡಿಯಾ ಟ್ರಸ್ಟ್‌ನಿಂದ ಈವರೆಗೆ ಕರ್ನಾಟಕದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಅಶಕ್ತರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಪೂರ್ಣ ಧನಸಹಾಯ ನೀಡಲಾಗಿದೆ.