Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ರುಡ್‌ಸೆಟ್‌, ಧರ್ಮಸ್ಥಳ

ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್, ಕೆನರಾಬ್ಯಾಂಕ್ ಸಾರ್ಡ್ ಫೌಂಡೇಷನ್, ಸಿಬಿಪಿಜೆಆರ್‌ಡಿ ಟ್ರಸ್ಟ್ ಸಂಯುಕ್ತವಾಗಿ ೧೯೮೨ರಲ್ಲಿ ಪ್ರಾರಂಭಿಸಿದ ಸಂಸ್ಥೆಯೇ ‘ರುಡ್‌ಸೆಟ್’.
ಕರ್ನಾಟಕದ ಉಜಿರೆಯಲ್ಲಿ ಕೇಂದ್ರ ಸ್ಥಾನವಿರುವ ರುಡ್‌ಸೆಟ್ ದೇಶದಾದ್ಯಂತ ೨೦ ಶಾಖೆಗಳನ್ನು ಹೊಂದಿದ್ದು ಗ್ರಾಮೀಣ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವಕಾಶ ಒದಗಿಸುತ್ತಾ ಬಂದಿದೆ.
ಪ್ರಧಾನ ಮಂತ್ರಿಗಳ ರೋಜ್ಜಾರ್ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡುವ ‘ರುಡ್‌ಸೆಟ್’ ಮಾದರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಎಲ್ಲಾ ರಾಜ್ಯಗಳಲ್ಲೂ ಇದರ ಜಾರಿಗೆ ಆದೇಶಿಸಿದೆ.
ಕರ್ನಾಟಕದ ನಾಲ್ಕು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಕ್ಷೇತ್ರಾಧಿಕಾರಿಗಳಿಗೆ ‘ಸ್ವಶಕ್ತಿ ಯೋಜನೆಯಡಿ ತರಬೇತಿ ನೀಡಿರುವ ‘ರುಡ್ ಸೆಟ್’ ರಾಜ್ಯದ ವೃತ್ತಿಪರ ಕಾಲೇಜುಗಳ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಬಳಕೆ ಕುರಿತ ತರಬೇತಿಯನ್ನು ವ್ಯವಸ್ಥೆ ಮಾಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದ ಸೂಕ್ತ ಅವಕಾಶಗಳನ್ನು ಗುರುತಿಸಿ ಅವುಗಳ ಅನುಷ್ಟಾನಕ್ಕೆ ತರಬೇತಿ ನೀಡುತ್ತಿರುವ ‘ರುಡ್‌ಸೆಟ್’ ಹಳ್ಳಿಗಾಡಿನ ಯುವ ಸಮುದಾಯದ ದಾರಿದೀಪ.