Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಿಷ್ಣುನಾಯ್ಕ

ಕನ್ನಡ ಪಾಠ ಮಾಡುತ್ತ ಕನ್ನಡ ಸಾಹಿತ್ಯ ರಚನೆಯಲ್ಲೂ ಸಾಧನೆ ಮಾಡಿದವರು ಅಂಕೋಲಾದ ಶ್ರೀ ವಿಷ್ಣುನಾಯ್ಕ ಅವರು.
ಕವನ, ನಾಟಕ, ಚರಿತ್ರೆ, ಕಥೆ ಹೀಗೆ ೪೩ ಗ್ರಂಥಗಳನ್ನು ರಚಿಸಿರುವ ಶ್ರೀ ವಿಷ್ಣುನಾಯ್ಕ ಅವರು ಗೌರೀಶ ಕಾಯ್ಕಿಣಿ, ಅಕಬರ ಅಲಿ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಸಂಪಾದಕರು.
ಕಾವ್ಯ ಕೃಷಿಗಾಗಿ ಬೇಂದ್ರೆ ಕಾವ್ಯ ಪುರಸ್ಕಾರ, ಲಿಂಗರಾಜ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಪಾತ್ರರಾಗಿರುವ ಶ್ರೀ ವಿಷ್ಣುನಾಯ್ಕ ಅವರ ರಾಘವೇಂದ್ರ ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಗ್ರಂಥ ಪ್ರಕಾಶನ ಪ್ರಶಸ್ತಿಯೂ ಸಂದಿದೆ.
ಕನ್ನಡ ಸಾಹಿತ್ಯ ಪರಿಚಾರಿಕೆಗಾಗಿ, ತಮ್ಮ ಕೃತಿಗಳಿಗಾಗಿ, ತಮ್ಮ ಪ್ರಕಾಶನಕ್ಕಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಶ್ರೀ ವಿಷ್ಣುನಾಯ್ಕ ಅವರಿಗೆ ಕರ್ನಾಟಕ ಸರ್ಕಾರ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ನೀಡಿದೆ.